ADVERTISEMENT

‘ಆಸ್ತಿ ಹಕ್ಕು’ ಕಾರ್ಡ್ ವಿತರಿಸುವ ‘ಸ್ವಾಮಿತ್ವ’ ಯೋಜನೆಗೆ ಚಾಲನೆ

ಪಿಟಿಐ
Published 11 ಅಕ್ಟೋಬರ್ 2020, 7:59 IST
Last Updated 11 ಅಕ್ಟೋಬರ್ 2020, 7:59 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಸ್ವಾಮಿತ್ವ’ (ಮಾಲೀಕತ್ವ) ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ‘ಆಸ್ತಿ ಹಕ್ಕು’ ಕಾರ್ಡ್ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

‘ಇದೊಂದು ಐತಿಹಾಸಿಕ ಹೆಜ್ಜೆ’ ಎಂದು ಪ್ರಧಾನಿ ಬಣ್ಣಿಸಿದರು. ಗ್ರಾಮೀಣ ಕುಟುಂಬಗಳು ಸಾಲ ಮತ್ತು ಇತರೆ ಹಣಕಾಸು ಸೌಲಭ್ಯಗಳನ್ನು ಪಡೆಯಲು ಈ ಕಾರ್ಡ್ ಅನ್ನು ಬಳಸಬಹುದಾಗಿದೆ.

ಯೋಜನೆಗೆ ಚಾಲನೆ ನೀಡಿರುವುದರಿಂದ ಮೊದಲ ಹಂತದಲ್ಲಿ ಸುಮಾರು 1 ಲಕ್ಷ ಕುಟುಂಬಗಳು ತಮಗೆ ಕಳುಹಿಸಲಾದ ಎಸ್.ಎಂ.ಎಸ್ ಲಿಂಕ್ ಬಳಸಿ ಆಸ್ತಿ ಕಾರ್ಡ್‌ಗಳನ್ನ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ADVERTISEMENT

ಈ ಫಲಾನುಭವಿ ಕುಟುಂಬಗಳನ್ನು ಕರ್ನಾಟಕದ ಎರಡು ಗ್ರಾಮಗಳು ಸೇರಿದಂತೆ ದೇಶದಾದ್ಯಂತ 763 ಗ್ರಾಮಗಳಿಂದ ಆಯ್ಕೆ ಮಾಡಲಾಗಿದೆ. ಉಳಿದಂತೆ, ಉತ್ತರ ಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100, ಮಧ್ಯಪ್ರದೇಶದ 44 ಮತ್ತು ಉತ್ತರಾಖಂಡದ 50 ಗ್ರಾಮಗಳು ಸೇರಿವೆ.

‘ಸ್ವಾಮಿತ್ವ‘ ಯೋಜನೆಯಡಿ ಆಯ್ಕೆಯಾದ ಗ್ರಾಮಗಳ ಕೆಲ ಫಲಾನುಭವಿಗಳ ಜೊತೆಗೂ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.