ನವದೆಹಲಿ: ರೌಡಿ ಶೀಟರ್ ವಿಕಾಸ ದುಬೆಗೆ ಪ್ರಮುಖ ಮಾಹಿತಿ ಒದಗಿಸಿದ್ದ ಆರೋಪದ ಮೇಲೆ ಅಮಾನತಿಗೆ ಒಳಗಾಗಿ, ಸದ್ಯ ಬಂಧನದಲ್ಲಿರುವ ಪೊಲೀಸ್ ಅಧಿಕಾರಿ ಈಗ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ದುಬೆ ಮತ್ತು ಆತನ ಸಹಚರರ ವಿರುದ್ಧ ನಡೆದಂತೆ ಎನ್ಕೌಂಟರ್ ನಡೆಯಬಹುದು ಎಂಬ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.ಸಬ್ಇನ್ಸ್ಪೆಕ್ಟರ್ ಕೃಷ್ಣ ಕುಮಾರ್ ಶರ್ಮಾ ಪರವಾಗಿ ಅವರ ಪತ್ನಿಅರ್ಜಿ ಸಲ್ಲಿಸಿದ್ದು, ಕಾನೂನುಬಾಹಿರ ಮಾರ್ಗಗಳ ಮೂಲಕ ತನ್ನ ಪತಿಯನ್ನೂ ಇನ್ನಿಲ್ಲವಾಗಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಂಧಿಸಲು ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ದುಬೆಗೆ ರವಾನಿಸಿದ್ದ ಆರೋಪದ ಮೇಲೆ ಶರ್ಮಾ ಮತ್ತು ಇತರೆ ಮೂವರನ್ನು ಜುಲೈ 5ರಂದು ಅಮಾನತುಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.