ADVERTISEMENT

ಜಮ್ಮು: ಗೋ–ಹತ್ಯೆ ವದಂತಿ ಹಬ್ಬಿಸಬೇಡಿ– ಪೊಲೀಸರ ಪ್ರಕಟಣೆ

ಪಿಟಿಐ
Published 22 ಆಗಸ್ಟ್ 2023, 15:46 IST
Last Updated 22 ಆಗಸ್ಟ್ 2023, 15:46 IST
Security officers arrive at the site of an attack in Jammu, the winter capital of Indian-controlled Kashmir, April 22, 2022. (Str/Xinhua/IANS)
Security officers arrive at the site of an attack in Jammu, the winter capital of Indian-controlled Kashmir, April 22, 2022. (Str/Xinhua/IANS)   

ಜಮ್ಮು: ಗೋ– ಹತ್ಯೆಗೆ ಸಂಬಂಧಿಸಿದಂತೆ ವದಂತಿಗಳನ್ನು ಹರಡದಂತೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್‌ವಾರ್‌ ಜಿಲ್ಲೆಯ ಪೊಲೀಸರು ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

ಕಿಶ್ತ್‌ವಾರ್‌ ಜಿಲ್ಲೆಯಲ್ಲಿ ಇತ್ತೀಚೆಗೆ ಗೋ ಹತ್ಯೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲಿಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಎರಡು ದಿನಗಳ ಹಿಂದೆ ಗಲ್ಹಾರ್‌ ಗ್ರಾಮದಲ್ಲಿ ಮೊಹಮದ್‌ ಯೂಸಫ್‌ ಎಂಬುವರ ಗೋವೊಂದು ಹಾವು ಕಡಿತದಿಂದ ಮೃತಪಟ್ಟಿತ್ತು. ಅದರ ಮೃತ ದೇಹವನ್ನು ಸಮೀಪದ ಮೈದಾನದಲ್ಲಿ ಇರಿಸಿದ್ದಾಗ ನಾಯಿಗಳು ದಾಳಿಯಿಟ್ಟಿವೆ. ಕೆಲ ಕಿಡಿಗೇಡಿಗಳು ಈ ವೇಳೆ ಫೋಟೊಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಕೋಮು ಗಲಭೆಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.