ತಿರುವನಂತಪುರ: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಮೂರು ಆಸ್ಪತ್ರೆಗಳು ನಿರಾಕರಿಸಿವೆ ಎಂಬ ಮಾಧ್ಯಮ ವರದಿಯನ್ನು ಆಧರಿಸಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಸ್ವಯಂ ಪ್ರೇರಿತ ಪ್ರಕರಣದಾಖಲಿಸಿದೆ.
‘ಕೊಲ್ಲಂ ಜಿಲ್ಲೆಯ ಕಲ್ಲುವತ್ತುಕಲ್ ಗ್ರಾಮದ ನಿವಾಸಿಯಾಗಿರುವ 8 ತಿಂಗಳ ಗರ್ಭಿಣಿ ಮೀರಾ ಅವರಲ್ಲಿ ತಳಮಳ ಉಂಟಾಗಿತ್ತು. ಅವರು ತಮ್ಮ ಮನೆಯ ಹತ್ತಿರದ ಎರಡು ಆಸ್ಪತ್ರೆ ಮತ್ತು ಅವಿಟ್ಟಂ ತಿರುನಾಲ್ ಆಸ್ಪತ್ರೆ ಮೊರೆ ಹೋಗಿದ್ದರು. ಆದರೆ, ಈ ಮೂರು ಆಸ್ಪತ್ರೆಗಳು ಮೀರಾ ಅವರನ್ನು ದಾಖಲಿಸಲು ನಿರಾಕರಿಸಿದ್ದವು’ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ಈ ಬಳಿಕ ಕೊಲ್ಲಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೀರಾ ಅವರನ್ನು ದಾಖಲಿಸಿ, ಹೆರಿಗೆ ಮಾಡಿಸಲಾಯಿತು. ಆದರೆ, ಮಗು ಆರು ದಿನಗಳ ಹಿಂದೆಯೇಗರ್ಭದಲ್ಲಿ ಮೃತಪಟ್ಟಿತ್ತು’ ಎಂದು ಆಯೋಗವು ತಿಳಿಸಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಕೊಲ್ಲಂ ಜಿಲ್ಲಾ ವೈದ್ಯಾಧಿಕಾರಿಗೆ ಆಯೋಗದ ಸದಸ್ಯೆ ವಿ.ಕೆ ಬೀನಾ ಕುಮಾರಿ ಅವರು ಸೂಚಿಸಿದ್ದಾರೆ.
ಈ ಸಂಬಂಧ ಮೂರು ವಾರಗಳೊಳಗೆ ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದು ಆಯೋಗ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.