ADVERTISEMENT

ರಾಜಸ್ಥಾನ: ಅನ್ಯಧರ್ಮ ಕಾರಣ ಗರ್ಭಿಣಿಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 3:25 IST
Last Updated 5 ಏಪ್ರಿಲ್ 2020, 3:25 IST
ರಾಜಸ್ಥಾನದ ಭರತಪುರದಲ್ಲಿ ಗರ್ಭಿಣಿ ಪತಿ ವೈದ್ಯರೊಡನೆ ಮಾತನಾಡುತ್ತಿರುವುದು
ರಾಜಸ್ಥಾನದ ಭರತಪುರದಲ್ಲಿ ಗರ್ಭಿಣಿ ಪತಿ ವೈದ್ಯರೊಡನೆ ಮಾತನಾಡುತ್ತಿರುವುದು   

ರಾಜಸ್ಥಾನ: ಗರ್ಭಿಣಿ ಅನ್ಯಧರ್ಮಕ್ಕೆ ಸೇರಿದವರೆಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ನಿರಾಕರಿಸಿದ ಘಟನೆ ಇಲ್ಲಿನಭರತಪುರದಲ್ಲಿ ನಡೆದಿದೆ.

ಶನಿವಾರ ಇಲ್ಲಿನ ಜನನ ಆಸ್ಪತ್ರೆಗೆ ಬಂದ ಗರ್ಭಿಣಿಯನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಕೂಡಲೆ ಆಕೆಯನ್ನು ಜೈಪುರ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ಭರತಪುರದಿಂದ ದೂರ ಜೈಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗರ್ಭಿಣಿಯ ಪತಿ ಜೈಪುರಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಹೆರಿಗೆಯಾಗಿದೆ. ಕೂಡಲೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಗು ಮೃತಪಟ್ಟಿದೆ ಎಂದು ಎಎನ್ಐ ವರದಿ ಮಾಡಿದೆ. ವೈದ್ಯರು ಜೈಪುರ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು. ನಾವು ಭರತಪುರ ದಾಟಿರಲಿಲ್ಲ. ಆಗಲೇ ಪತ್ನಿಗೆ ಹೆರಿಗೆಯಾಯಿತು. ಗಂಡು ಮಗು. ಸ್ವಲ್ಪ ಸಮಯದ ನಂತರ ಮಗು ತೀರಿಕೊಂಡಿತು ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.