ADVERTISEMENT

ಖಾಸಗಿ ಮದರಸಾಗಳನ್ನು ಎಂದಿಗೂ ಮುಚ್ಚಬಾರದು: ಅಸ್ಸಾಂ ವಿಧಾನಸಭೆ ಉಪಾಧ್ಯಕ್ಷ

ಪಿಟಿಐ
Published 3 ನವೆಂಬರ್ 2020, 8:30 IST
Last Updated 3 ನವೆಂಬರ್ 2020, 8:30 IST
ಅಮಿನುಲ್ ಹಕ್ ಲಸ್ಕರ್
ಅಮಿನುಲ್ ಹಕ್ ಲಸ್ಕರ್   

ಗುವಾಹಟಿ: ‘ಖಾಸಗಿ ಮದರಸಾಗಳು ಮುಸಲ್ಮಾನರನ್ನು ಸಕ್ರಿಯರಾಗಿ ಉಳಿಸಿದ್ದು, ಅವುಗಳನ್ನು ಎಂದಿಗೂ ಮುಚ್ಚಬಾರದು’ ಎಂದು ಅಸ್ಸಾಂ ವಿಧಾನಸಭೆಯ ಉಪಾಧ್ಯಕ್ಷ ಅಮಿನುಲ್ ಹಕ್ ಲಸ್ಕರ್ ಪ್ರತಿಪಾದಿಸಿದ್ದಾರೆ.

ಈಚೆಗೆ ಸರ್ಕಾರ ಅಸ್ಸಾಂನಲ್ಲಿ ಇರುವ ಎಲ್ಲ ಮದರಸಾಗಳು ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಿದ್ದು, ಅಧಿಸೂಚನೆಯನ್ನು ಹೊರಡಿಸಿತ್ತು.

‘ಯಾವುದಾದರೂ ಮದರಸಾ ಮುಚ್ಚಲಾಗಿದೆಯೇ? ಎಂದಿಗೂ ಅವುಗಳನ್ನು ಮುಚ್ಚಬಾರರದು. ಅವು ಮಸಲ್ಮಾನರನ್ನು ಸಕ್ರಿಯವಾಗಿ ಇರಿಸಿವೆ’ ಎಂದು ಕ್ಯಾಚರ್ ಜಿಲ್ಲೆಯಲ್ಲಿ ಮದರಸಾ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ADVERTISEMENT

ಮೌಲಾನಾ ಮತ್ತು ಖಾಜಿಗಳು ಇಂಥ ಮದರಸಾದಿಂದಲೇ ಬಂದಿದ್ದಾರೆ. ಮಸೀದಿಗಳ ಮೌಲ್ವಿಗಳು ಇಲ್ಲಿ ಕಲಿತಿದ್ದಾರೆ. ಮದರಸಾಗಳನ್ನು ಮುಚ್ಚಿದರೆ ಪ್ರತಿಭಟಿಸಿ. ಕಾಂಗ್ರೆಸ್ ಪ್ರತಿಭಟಿಸಿದರೆ ಅವರಿಗೆ ಕೇವಲ ಸರ್ಕಾರ ನಡೆಸುತ್ತಿರುವ ಮದರಸಾಗಳನ್ನಷ್ಟೇ ಮುಚ್ಚಲಾಗುತ್ತಿದೆ ಎಂದು ತಿಳಿಸಿ ಎಂದು ಉಪಾಧ್ಯಕ್ಷರು ಸಲಹೆ ಮಾಡಿದರು.

ಶಿಕ್ಷಣ ಸಚಿವ ಹಿಮಾಂತಾ ಬಿಸ್ವಶರ್ಮಾ ಅವರು, ಸರ್ಕಾರ ನಡೆಸುತ್ತಿರುವ ಎಲ್ಲ ಮದರಸಾಗಳನನ್ನು ಮುಚ್ಚಲಾಗುತ್ತದೆ. ಜಾತ್ಯತೀತ ವ್ಯವಸ್ಥೆಯಲ್ಲಿ ಸರ್ಕಾರ ಎಂದಿಗೂ ಧರ್ಮದ ಆಧಾರದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡಲಾಗದು’ ಎಂದು ಹೇಳಿದ್ದರು. ಇದಕ್ಕೆ ವಿರೋಧಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.