ADVERTISEMENT

VIDEO: ಅಸ್ಸಾಂನಲ್ಲಿ ಚಹಾದ ಎಲೆ ಕೊಯ್ಲು ಮಾಡಿದ ಪ್ರಿಯಾಂಕಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 12:20 IST
Last Updated 2 ಮಾರ್ಚ್ 2021, 12:20 IST

ಗುವಾಹಟಿ: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಸಂದರ್ಭ ತೇಜ್ ಪುರ್‌ನ ಸಧಾರು ಟೀ ತೋಟಕ್ಕೆ ಭೇಟಿ ಕೊಟ್ಟ ಅವರು ಕಾರ್ಮಿಕ ಮಹಿಳೆಯರು ಜೊತೆ ಟೀ ಎಲೆಗಳನ್ನು ಕೊಯ್ಲು ಮಾಡಿ, ಅವರ ದುಃಖ ದುಮ್ಮಾನ ಆಲಿಸಿದರು. ಮಾರ್ಚ್ 27ರಂದು ಅಸ್ಸಾಂ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯುತ್ತಿದೆ. ಇಲ್ಲಿ ಮೂರು ಹಂತಗಳಲ್ಲಿ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.