ಬುರಹಾನಪುರ, ಮಧ್ಯ ಪ್ರದೇಶ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯು ಬುಧವಾರ ಮಧ್ಯ ಪ್ರದೇಶ ಪ್ರವೇಶಿಸಿದೆ.
ಮಹಾರಾಷ್ಟ್ರ-ಮಧ್ಯ ಪ್ರದೇಶ ಗಡಿ ಬೊಡೆರ್ಲಿ ಗ್ರಾಮದ ಮೂಲಕ ಯಾತ್ರೆಯು ಪ್ರವೇಶಿಸಿತು. ಯಾತ್ರೆಯ ಧ್ವಜವನ್ನು ಮಧ್ಯ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರಿಗೆ ಹಸ್ತಾಂತರಿಸಲಾಯಿತು.
ಮಧ್ಯ ಪ್ರದೇಶ ವಿಧಾನಸಭೆಯ ಪ್ರತಿಪಕ್ಷ ನಾಯಕ ಗೋವಿಂದ ಸಿಂಗ್ ಅವರೂ ಯಾತ್ರೆಯ ಧ್ವಜವನ್ನು ಹಿಡಿದರು. ಈ ಸಂದರ್ಭ ದೊಡ್ಡ ಸಂಖ್ಯೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.