ADVERTISEMENT

ಕಣ್ಗಾವಲಿನಲ್ಲಿ ಪಶ್ಚಿಮ ಬಂಗಾಳದ ರಾಜಭವನ; ರಾಜ್ಯಪಾಲರ ಆರೋಪ

ಪಿಟಿಐ
Published 16 ಆಗಸ್ಟ್ 2020, 10:54 IST
Last Updated 16 ಆಗಸ್ಟ್ 2020, 10:54 IST
ಜಗದೀಪ್ ಧಂಖರ್
ಜಗದೀಪ್ ಧಂಖರ್   

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಭವನವನ್ನು ಕಣ್ಗಾವಲಿನಲ್ಲಿ ಇರಿಸಲಾಗಿದ್ದು, ಈ ಕ್ರಮವು ಸಂಸ್ಥೆಯ ಪಾವಿತ್ರ್ಯವನ್ನೇ ಹಾಳು ಮಾಡುತ್ತಿದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಆರೋಪಿಸಿದ್ದಾರೆ.

ವರ್ಷದಿಂದ ಹಲವು ವಿಷಯಗಳ ಬಗ್ಗೆ ಟಿಎಂಸಿ ಸರ್ಕಾರದೊಂದಿಗೆ ಹಲವು ಪ್ರಕರಣಗಳ ಕಾರಣಕ್ಕಾಗಿ ಸಂಘರ್ಷ ನಡೆಸುತ್ತಲೇ ಇರುವ ರಾಜ್ಯಪಾಲರು, ‘ಸರ್ಕಾರ ರಾಜಭವನವನ್ನು ಕಣ್ಗಾವಲಿನಲ್ಲಿಟ್ಟಿದ್ದು, ಇದರಿಂದ ರಾಜ್ಯದಲ್ಲಿ ಅರಾಜಕತೆ ಮುಂದುವರಿದಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

‘ರಾಜಭವನದ ಪಾವಿತ್ರ್ಯ ರಕ್ಷಣೆಗೆ ನಾನು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.