ADVERTISEMENT

ಪಾಕ್‌ ಸಚಿವರ ಹೇಳಿಕೆಗೆ ರಾಹುಲ್‌ ಪ್ರತಿಕ್ರಿಯಿಸಲಿ: ರಾಜನಾಥ್ ಸಿಂಗ್‌

ಏಜೆನ್ಸೀಸ್
Published 4 ನವೆಂಬರ್ 2020, 16:53 IST
Last Updated 4 ನವೆಂಬರ್ 2020, 16:53 IST
ರಾಜನಾಥ್ ಸಿಂಗ್‌
ರಾಜನಾಥ್ ಸಿಂಗ್‌   

ಪಟ್ನಾ: ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ ಕುರಿತಂತೆ ಪಾಕ್‌ ಸಚಿವರ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಮೌನವಾಗಿರುವುದು ಏಕೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್‌ ಪ್ರಶ್ನೆ ಮಾಡಿದ್ದಾರೆ.

ಇಲ್ಲಿನ ಮುಜಾಫರ್‌ನಗರದಲ್ಲಿ ಚುನಾವಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ ಕುರಿತಂತೆ ಪಾಕ್‌ ಸಚಿವರ ಹೇಳಿಕೆ ಬಗ್ಗೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಮೌನವಾಗಿರುವುದು ಏಕೆ ಕೇಳಿದ್ದಾರೆ.

ಸರ್ಜಿಕಲ್‌ ದಾಳಿ ಮೂಲಕ ಭಾರತ ತಕ್ಕ ಉತ್ತರ ಕೊಟ್ಟಿರುವುದು ಮೋದಿ ಸಾಮರ್ಥ್ಯವಾಗಿದೆ. ಮೊದಲು ನೀವು ಪಾಕ್‌ ಸಚಿವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಎಂದು ರಾಜನಾಥ್‌ ಸಿಂಗ್‌ ಅವರು ಹೇಳಿದರು.

ADVERTISEMENT

ಲಾಲು ಪ್ರಸಾದ್‌ ಆಡಳಿತದಲ್ಲಿ ಬಿಹಾರ ಜಂಗಲ್‌ ರಾಜ್ಯವಾಗಿತ್ತು. ಎನ್‌ಡಿಎ ಬಂದ ಮೇಲೆ ಅಭಿವೃದ್ಧಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.