ಬದೋಹಿ (ಉತ್ತರ ಪ್ರದೇಶ) : ‘ಸುಪ್ರೀಂ ಕೋರ್ಟ್ ಆದೇಶದಂತೆ ರಾಮ ಮಂದಿರ ನಿರ್ಮಾಣಕ್ಕಾಗಿ ರೂಪಿಸಲಾಗುತ್ತಿರುವ ಟ್ರಸ್ಟ್ನ ನೇತೃತ್ವವನ್ನುಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ವಹಿಸಲಿ’ ಎಂದುಅಯೋಧ್ಯೆಯ ತಪಸ್ವೀಜಿ ಕೀ ಛವಾನಿಯ ಪರಮಹಂಸಜೀ ಮಹಾರಾಜ್ ಅವರು ಸೋಮವಾರ ಹೇಳಿದರು.
‘ಜತೆಗೆ, ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಆರ್ಎಸ್ಎಸ್ಗೆ ವಹಿಸಬೇಕು. ರಾಷ್ಟ್ರದ ನಿರ್ಮಾಣವಾಗಿರಬಹುದು ಅಥವಾ ಮಂದಿರ ನಿರ್ಮಾಣವಾಗಿರಬಹುದು, ಆರ್ಎಸ್ಎಸ್ ಕೆಲಸ ಮಾಡಿದಂತೆ ಬೇರೆ ಯಾರೂ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.