ನವದೆಹಲಿ: ಸೇನಾ ನೇಮಕಾತಿ 'ಅಗ್ನಿಪಥ' ವಿರೋಧಿಸಿ ಶಾಂತಿಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ನಕಲಿ ರಾಷ್ಟ್ರವಾದಿಗಳನ್ನು ಮತ್ತು ನಕಲಿ ದೇಶಭಕ್ತರನ್ನುಗುರುತಿಸುವಂತೆ ಕರೆ ನೀಡಿದರು.
ಜಂತರ್ ಮಂತರ್ನಲ್ಲಿ ನಡೆಯುತ್ತಿರುವ 'ಸತ್ಯಾಗ್ರಹ'ದಲ್ಲಿ ಭಾನುವಾರ 'ಅಗ್ನಿಪಥ' ವಿರೋಧಿಸಿ ಹೋರಾಡುತ್ತಿರುವ ಯುವ ಸಮುದಾಯವನ್ನು ಉದ್ದೇಶಿಸಿಪ್ರಿಯಾಂಕಾ ಗಾಂಧಿ ಮಾತನಾಡಿದರು. ನಿಮಗಿಂತ ದೊಡ್ಡ ದೇಶಭಕ್ತರು ಬೇರೆ ಇಲ್ಲ. ನಿಮಗೊಂದು ಮಾತನ್ನು ಹೇಳಲು ಬಯಸುತ್ತೇನೆ. ನಿಮ್ಮ ಕಣ್ಣುಗಳನ್ನು ತೆರೆಯಿರಿ. ನಕಲಿ ರಾಷ್ಟ್ರವಾದಿಗಳನ್ನು ಮತ್ತು ನಕಲಿ ದೇಶಭಕ್ತರನ್ನು ಗುರುತಿಸಿ. ಸಂಪೂರ್ಣ ದೇಶ ನಿಮ್ಮೊಂದಿಗಿದೆ. ನಿಮ್ಮ ಹೋರಾಟದ ಜೊತೆ ಕಾಂಗ್ರೆಸ್ ಇದೆ ಎಂದು ಹುರಿದುಂಬಿಸಿದರು.
ಕವಿ ಹರಿವಂಶ ರಾಯ್ ಬಚ್ಚನ್ ಅವರ 'ಅಗ್ನಿಪಥ' ಗೀತೆಯ ಸಾಲುಗಳನ್ನು ಉಲ್ಲೇಖಿಸಿ, ತಾಳ್ಮೆಯಿಂದ ಮತ್ತು ಶಾಂತಿಯಿಂದ ಹೋರಾಟವನ್ನು ಮುಂದುವರಿಸಬೇಕು ಎಂದು ಒತ್ತಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.