ADVERTISEMENT

ಕಾಶ್ಮೀರ: ಶಂಕಿತ ಉಗ್ರರ ಗುಂಡಿನ ದಾಳಿಗೆ ಆರ್‌ಎಸ್‍ಎಸ್ ನಾಯಕ ಬಲಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 10:49 IST
Last Updated 9 ಏಪ್ರಿಲ್ 2019, 10:49 IST
ಕರ್ಫ್ಯೂ- ಸಾಂದರ್ಭಿಕ ಚಿತ್ರ
ಕರ್ಫ್ಯೂ- ಸಾಂದರ್ಭಿಕ ಚಿತ್ರ   

ಕಿಶ್ತ್‌ವಾರ್: ಜಮ್ಮು ಕಾಶ್ಮೀರದ ಕಿಶ್ತ್‌ವಾರ್‌ನಲ್ಲಿ ಶಂಕಿತ ಉಗ್ರರು ಆರ್‌ಎಸ್‌ಎಸ್ ನಾಯಕ ಚಂದ್ರಕಾಂತ್ ಸಿಂಗ್ ಮತ್ತು ಇವರ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ದಾಳಿ ನಡೆಸಿದವರ ಪತ್ತೆಗಾಗಿ ರಕ್ಷಣಾ ಪಡೆ ಶೋಧ ಕಾರ್ಯ ಆರಂಭಿಸಿದ್ದು, ಪ್ರಸ್ತುತ ಪ್ರದೇಶದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಏಪ್ರಿಲ್ 11ರಂದು ಜಮ್ಮು - ಪೂಂಚ್ ಚುನಾವಣಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಚುನಾವಣೆಗೆ ಮುನ್ನ ಈ ರೀತಿಯ ದಾಳಿ ನಡೆದಿರುವುದು ಜನರಲ್ಲಿಆತಂಕ ಸೃಷ್ಟಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.