ADVERTISEMENT

ಶಬರಿಮಲೆ ತಂತ್ರಿಗಳನ್ನು ವಜಾಗೊಳಿಸುವ ಅಧಿಕಾರ ಸರ್ಕಾರಕ್ಕಿದೆ: ಸಚಿವ ಸುರೇಂದ್ರನ್

ಟಿಡಿಬಿ ವರದಿ ಬಳಿಕ ತಂತ್ರಿಗಳ ವಿರುದ್ಧ ಕ್ರಮ ಎಂದ ಸಚಿವ

ಏಜೆನ್ಸೀಸ್
Published 7 ಜನವರಿ 2019, 10:51 IST
Last Updated 7 ಜನವರಿ 2019, 10:51 IST
ಕಡಕಂಪಳ್ಳಿ ಸುರೇಂದ್ರನ್
ಕಡಕಂಪಳ್ಳಿ ಸುರೇಂದ್ರನ್   

ಪತ್ತನಂತಿಟ್ಟ:ಶಬರಿಮಲೆ ಅಯ್ಯಪ್ಪ ದೇಗುಲದ ತಂತ್ರಿ ಅಥವಾ ಮುಖ್ಯ ಅರ್ಚಕರನ್ನು ಅಗತ್ಯವೆನಿಸಿದಲ್ಲಿ ವಜಾಗೊಳಿಸುವ ಅಧಿಕಾರ ಸರ್ಕಾರಕ್ಕಿದೆ ಎಂದು ಕೇರಳದ ದೇವಸ್ವಂ ಸಚಿವಕಡಕಂಪಳ್ಳಿ ಸುರೇಂದ್ರನ್ ಹೇಳಿದ್ದಾರೆ.

ಶಬರಿಮಲೆ ತಂತ್ರಿಗಳನ್ನು ನೇಮಕ ಮಾಡಿದ್ದುತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ). ಹೀಗಾಗಿ ಮಂಡಳಿ ತೀರ್ಮಾನಿಸಿದರೆ ಅವರನ್ನು ವಜಾ ಮಾಡಬಹುದು ಎಂದು ಸುರೇಂದ್ರನ್ ಹೇಳಿದ್ದಾರೆ.

ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ ನಂತರ ಶುದ್ಧೀಕರಣಕ್ಕಾಗಿ ದೇಗುಲದ ಬಾಗಿಲು ಮುಚ್ಚಿದ್ದ ತಂತ್ರಿಗಳ ವಿರುದ್ಧಟಿಡಿಬಿ ವರದಿ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ತಂತ್ರಿಗಳನ್ನು ಆರ್‌ಎಸ್‌ಎಸ್‌ ಆಯುಧವಾಗಿ ಬಳಸಿಕೊಂಡಿದೆ ಎಂದೂ ಅವರು ಆರೋಪಿಸಿದ್ದಾರೆ.

ADVERTISEMENT

15 ದಿನ ಗಡುವು:ಶುದ್ಧೀಕರಣಕ್ಕಾಗಿ ದೇಗುಲದ ಬಾಗಿಲು ಮುಚ್ಚಿದ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ತಂತ್ರಿ ಕಂಡರಾರು ರಾಜೀವರು ಅವರಿಗೆದೇವಸ್ವಂ ಮಂಡಳಿ ಸೂಚಿಸಿದೆ. 15 ದಿನಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೇವಸ್ವಂ ಮಂಡಳಿ ಅಧ್ಯಕ್ಷ ಪದ್ಮಕುಮಾರ್ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.