ADVERTISEMENT

ಶರವಣ ಭವನ ಮಾಲೀಕ ಕೋರ್ಟ್‌ಗೆ ಶರಣು

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 18:38 IST
Last Updated 9 ಜುಲೈ 2019, 18:38 IST
ಪಿ. ರಾಜಗೋಪಾಲ್‌
ಪಿ. ರಾಜಗೋಪಾಲ್‌   

ನವದೆಹಲಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶರವಣ ಭವನ ಹೋಟೆಲ್‌ ಸಮೂಹದ ಮಾಲೀಕ ಪಿ. ರಾಜಗೋಪಾಲ್‌ ಮಂಗಳವಾರ ನ್ಯಾಯಾಲಯಕ್ಕೆ ಶರಣಾದನು.

ಅನಾರೋಗ್ಯದ ಕಾರಣ ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದ ನಂತರ ರಾಜಗೋಪಾಲ್‌ ಶರಣಾಗಿದ್ದಾನೆ.

ಜುಲೈ 7ರಂದು ಶರಣಾಗುವಂತೆ ರಾಜಗೋಪಾಲ್‌ಗೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ, ಅನಾರೋಗ್ಯಕ್ಕೆ ತುತ್ತಾಗಿದ್ದ ಅವನು, ಆಸ್ಪತ್ರೆಗೆ ದಾಖಲಾಗಿದ್ದನು.

ADVERTISEMENT

ಶರವಣ ಭವನದ ನೌಕರನಾಗಿದ್ದ ಶಾಂತಕುಮಾರ್‌ನ ಪತ್ನಿಯನ್ನು ಮೂರನೇ ಮದುವೆಯಾಗಲು ರಾಜಗೋಪಾಲ್‌ ಬಯಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ನೌಕರನನ್ನು ಅಪಹರಿಸಿ 2001ರಲ್ಲಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದಲ್ಲಿ ಗೋಪಾಲ್‌ಗೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರಿಂ ಕೋರ್ಟ್‌ ಎತ್ತಿ ಹಿಡಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.