ನವದೆಹಲಿ: ನೈಜೀರಿಯಾ ಕಡಲ ಪ್ರದೇಶದಲ್ಲಿ 18 ಮಂದಿ ಭಾರತೀಯರಿದ್ದ ಹಡಗನ್ನು ಅಪಹರಿಸಲಾಗಿದೆ.
ಸೋಮವಾರ ಈ ಪ್ರಕರಣ ನಡೆದಿದ್ದು ಹಡಗಿನಲ್ಲಿದ್ದ 19 ಮಂದಿ ಪೈಕಿ 18 ಮಂದಿ ಭಾರತೀಯರಾಗಿದ್ದಾರೆ. ಅಪಹೃತರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ನೈಜೀರಿಯಾದಲ್ಲಿರುವ ಭಾರತೀಯರ ನಿಯೋಗವು ಆಫ್ರಿಕಾದ ಆಡಳಿತಕ್ಕೆ ಮನವಿ ಮಾಡಿದೆ. ಅಪಹೃತರ ವಿವರ ಹಾಗೂ ರಕ್ಷಣೆ ನೀಡುವಂತೆ ಕೋರಿದೆ ಎಂದು ಹಡಗುಗಳ ಸಂಚಾರದ ಮೇಲೆ ನಿಗಾವಹಿಸುವ ಜಾಗತಿಕ ಸಂಸ್ಥೆಎಆರ್ಎಕ್ಸ್ ಮೆರಿಟೈಮ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.