ADVERTISEMENT

ಶ್ರೀ ಕೃಷ್ಣ ಜನ್ಮಭೂಮಿ ಪ್ರಕರಣ; ಅರ್ಜಿ ತಿರಸ್ಕರಿಸಿದ ಅಲಹಬಾದ್‌ ಹೈಕೋರ್ಟ್‌

ಪಿಟಿಐ
Published 4 ಜುಲೈ 2025, 15:52 IST
Last Updated 4 ಜುಲೈ 2025, 15:52 IST
ಶಾಹಿ ಈದ್ಗಾ ಮಸೀದಿ–ಪಿಟಿಐ ಚಿತ್ರ
ಶಾಹಿ ಈದ್ಗಾ ಮಸೀದಿ–ಪಿಟಿಐ ಚಿತ್ರ   

ಲಖನೌ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ‘ಶಾಹಿ ಈದ್ಗಾ ಮಸೀದಿಯನ್ನು ವಿವಾದಿತ ರಚನೆ ಪರಿಗಣಿಸಬೇಕು ಎಂದು ಕೋರಿ ಹಿಂದೂ ಪ್ರತಿವಾದಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

‘ಯಾವುದೇ ಸಾಕ್ಷ್ಯ ಹಾಗೂ ದಾಖಲೆಗಳನ್ನು ಒದಗಿಸದೇ, ಶಾಹಿ ಈದ್ಗಾ ಮಸೀದಿಯನ್ನು ವಿವಾದಿತ ರಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದ ನ್ಯಾಯಮೂರ್ತಿ ರಾಮ್‌ ಮನೋಹರ್ ಮಿಶ್ರಾ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ತಿರಸ್ಕರಿಸಿತು.

ಮಸೀದಿಯನ್ನು ವಿವಾದಿತ ರಚನೆ ಎಂದು ಕೋರಿ ಶ್ರೀ ಕೃಷ್ಣ ಮುಕ್ತಿ ಟ್ರಸ್ಟ್‌ನ ಅಧ್ಯಕ್ಷ ಮಹೇಂದ್ರ ಸಿಂಗ್‌ ಪ್ರತಾಪ್‌ ಸಿಂಗ್‌ ಅವರು ಅರ್ಜಿ ಸಲ್ಲಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.