ADVERTISEMENT

ಹಿಂದೂ ಸಮಾಜ್‌ ಪಾರ್ಟಿ ಅಧ್ಯಕ್ಷೆಯಾಗಿ ಕಮಲೇಶ್‌ ಪತ್ನಿ ನೇಮಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 19:30 IST
Last Updated 26 ಅಕ್ಟೋಬರ್ 2019, 19:30 IST

ಲಖನೌ: ಹತ್ಯೆಗೀಡಾದ ಕಮಲೇಶ್‌ ತಿವಾರಿ ಅವರ ಪತ್ನಿ ಕಿರಣ್‌ ತಿವಾರಿ ಅವರನ್ನು ಹಿಂದೂ ಸಮಾಜ್‌ ಪಾರ್ಟಿಯ ಅಧ್ಯಕ್ಷೆಯಾಗಿ ಶನಿವಾರ ನೇಮಕ ಮಾಡಲಾಗಿದೆ.

‘ನನ್ನ ಪತಿಗೆ ಉತ್ತರ ಪ್ರದೇಶ ಸರ್ಕಾರ ಅಗೌರವ ತೋರಿದೆ. ನನ್ನ ಬೇಡಿಕೆಗಳಿಗೂ ಸ್ಪಂದಿಸಿಲ್ಲ‘ ಎಂದು ಕಿರಣ್‌ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಕಮಲೇಶ್‌ ತಿವಾರಿ ಅವರು ಈಚೆಗೆ ತಮ್ಮ ಕಚೇರಿಯಲ್ಲೇ ಹತ್ಯೆಗೀಡಾಗಿದ್ದರು. ಈ ಸಂಬಂಧ ಎಂಟು ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ADVERTISEMENT

‘ಪತಿಯ ಕೊಲೆಗಾರರನ್ನು ಗಲ್ಲಿಗೇರಿಸಬೇಕು’ ಎಂದೂ ಕಿರಣ್‌ ಆಗ್ರಹಿಸಿದ್ದಾರೆ. ಪತಿಯ ಪ್ರತಿಮೆ ಸ್ಥಾಪಿಸಬೇಕು ಎಂಬ ಅವರ ಬೇಡಿಕೆಯನ್ನು ಉತ್ತರ ಪ್ರದೇಶ ಸರ್ಕಾರ ತಳ್ಳಿಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.