ADVERTISEMENT

ಅರಾಜಕತೆಗೆ ಯತ್ನದ ವಿರುದ್ಧ ಜಾಗೃತಿ ಅಗತ್ಯ: ಆರ್‌ಎಸ್‌ಎಸ್‌

ಪಿಟಿಐ
Published 13 ಮಾರ್ಚ್ 2023, 23:21 IST
Last Updated 13 ಮಾರ್ಚ್ 2023, 23:21 IST

ಸಮಾಲಖಾ, ಹರಿಯಾಣ: ‘ದೇಶದ ಒಳಗೆ ಮತ್ತು ಹೊರಗಡೆ ಹಿಂದುತ್ವ ಚಿಂತನೆ ವಿರೋಧಿಸುತ್ತಿರುವ ಕೆಲವು ಶಕ್ತಿಗಳು ಸಮಾಜದಲ್ಲಿ ಅರಾಜಕತೆ ಮೂಡಿಸಲು ಸಂಚು ನಡೆಸುತ್ತಿವೆ. ಅಂತಹ ಚಿಂತನೆಯನ್ನು ವಿಫಲಗೊಳಿಸುವ ಅಗತ್ಯವಿದೆ’ ಎಂದು ಆರ್‌ಎಸ್‌ಎಸ್‌ ಹೇಳಿದೆ.

ಇಲ್ಲಿ ನಡೆದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉನ್ನತಾಧಿಕಾರ ಸಮಿತಿಯಾದ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನು ಕೈಗೊಳ್ಳಲಾಗಿದೆ.

ವಿಶ್ವದ ಅನೇಕ ರಾಷ್ಟ್ರಗಳು ಭಾರತವನ್ನು ಗೌರವಿಸುತ್ತವೆ. ಕೆಲ ಶಕ್ತಿಗಳಿಗೆ, ಸ್ವಾವಲಂಬನೆ ಆಧರಿಸಿದ ಭಾರತೀಯತೆಯ ಪುನರುತ್ಥಾನ ಸಹಿಸಲಾಗುತ್ತಿಲ್ಲ. ಇಂಥ ಶಕ್ತಿಗಳೇ ದೇಶದ ಒಳಗೆ ಮತ್ತು ಹೊರಗಡೆ ಹಿಂದುತ್ವದ ಚಿಂತನೆಯನ್ನು ವಿರೋಧಿಸುತ್ತಿವೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿವೆ. ಇವುಗಳ ವಿರುದ್ಧ ಜಾಗೃತಿ ಅಗತ್ಯ ಎಂದು ಹೇಳಲಾಗಿದೆ.

ADVERTISEMENT

ಭಾನುವಾರ ಆರಂಭವಾದ ವಾರ್ಷಿಕ ಸಭೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್, ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ವಿವಿಧ ಪದಾಧಿಕಾರಿಗಳು ಭಾಗವಹಿಸಿದ್ದರು. ವಿಎಚ್‌ಪಿ ಒಳಗೊಂಡು ಆರ್‌ಎಸ್‌ಎಸ್‌ ಜೊತೆಗೆ ಗುರುತಿಸಿಕೊಂಡ 34 ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಭೆಯು ಮಂಗಳವಾರ ಅಂತ್ಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.