ಮುಂಬೈ: ಮಾತೃಭಾಷೆಯಲ್ಲಿ ಶಿಕ್ಷಣ ಪಡೆವುದರಿಂದ ಜ್ಞಾನವು ಹೆಚ್ಚಾಗುತ್ತದೆ. ಇದು ನಮ್ಮ ಜೀವನದಲ್ಲಿ ಮೌಲ್ಯಗಳನ್ನು ತುಂಬುತ್ತದೆ ಎಂದು ಸಿಜೆಐ ಬಿ.ಆರ್ ಗವಾಯಿ ಹೇಳಿದರು.
ಮುಂಬೈಯಲ್ಲಿ ತಾವು ಕಲಿತ ಚಿಕಿತ್ಸಕ್ ಸಮೂಹ್ ಶಿರೋಡ್ಕರ್ ಶಾಲೆಗೆ ಭೇಟಿ ನೀಡಿದ್ದ ಗವಾಯಿ ಅವರು ತಮ್ಮ ಹಳೆಯ ಸಹಪಾಠಿಗಳೊಂದಿಗೆ ಮಾತನಾಡಿದರು.
ಈ ವೇಳೆ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದ ಅವರು, ‘ನನ್ನ ಜೀವನವನ್ನು ರೂಪಿಸಿದ ಶಿಕ್ಷಕರಿಗೆ ಕೃತಜ್ಞನಾಗಿರುತ್ತೇನೆ. ನಾನು ನನ್ನ ಮಾತೃಭಾಷೆ ಮರಾಠಿ ಮಾದ್ಯಮದಲ್ಲಿ ಇಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ’ ಎಂದರು.
‘ಇಂದು ನಾನು ಯಾವುದೇ ಸ್ಥಾನ ತಲುಪಿದ್ದರೂ ಅದರಲ್ಲಿ ನನ್ನ ಶಿಕ್ಷಕರ ಹಾಗೂ ಈ ಶಾಲೆಯದ್ದು ಮಹತ್ವದ ಪಾತ್ರವಿದೆ. ಇಲ್ಲಿ ಪಡೆದ ಶಿಕ್ಷಣ ಮತ್ತು ಮೌಲ್ಯಗಳು ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿವೆ. ಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನನ್ನಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.