ADVERTISEMENT

ಉಪವಾಸ ಕೈಬಿಟ್ಟ ಸ್ವಾಮಿ ಆತ್ಮಬೋಧಾನಂದ

​ಪ್ರಜಾವಾಣಿ ವಾರ್ತೆ
Published 5 ಮೇ 2019, 18:43 IST
Last Updated 5 ಮೇ 2019, 18:43 IST

ಹರಿದ್ವಾರ: ಗಂಗಾ ಉಳಿವಿಗಾಗಿ ಪಣತೊಟ್ಟು ಸತತ 194 ದಿನಗಳಿಂದ ಹರಿದ್ವಾರದಲ್ಲಿ ಉಪವಾಸ ಕೈಗೊಂಡಿದ್ದ ಸ್ವಾಮಿ ಆತ್ಮಬೋಧಾನಂದ ಅವರು ಭಾನುವಾರ ಉಪವಾಸ ಕೊನೆಗೊಳಿಸಿದ್ದಾರೆ.

ಗಂಗಾನದಿ ಸ್ವಚ್ಛತೆ ರಾಷ್ಟ್ರೀಯ ಅಭಿಯಾನದ (ಎನ್‌ಎಂಸಿಜಿ) ಕಾರ್ಯಕಾರಿ ಸಮಿತಿಯಿಂದ ಲಿಖಿತ ಭರವಸೆ ದೊರೆತ ಬಳಿಕ ಹಣ್ಣಿನ ರಸ ಸೇವಿಸುವುದರ ಮೂಲಕ ಉಪವಾಸ ಕೈಬಿಟ್ಟಿದ್ದಾರೆ.

ಎನ್‌ಎಂಸಿಜಿಯ ನಿರ್ದೇಶಕ ರಾಜೀವ್ ರಂಜನ್ ಅವರನ್ನು ಏ.25ರಂದು ಭೇಟಿ ಮಾಡಿದ ವೇಳೆ ಅಣೆಕಟ್ಟು ನಿರ್ಮಾಣ, ನದಿಗಳ ಉಳಿವು, ಗಣಿಗಾರಿಕೆ ಹೀಗೆ ಇನ್ನಿತರೆ ವಿಚಾರಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಲಿಖಿತ ಪತ್ರ ನೀಡಿದ್ದೆ ಎಂದು ಆತ್ಮಬೋಧಾನಂದ ಹೇಳಿದ್ದಾರೆ. ಸರ್ಕಾರ ಹಾಗೂ ಎನ್‌ಎಂಸಿಜಿ ಸಮಿತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.