ನವದೆಹಲಿ: ವಿಪಕ್ಷಗಳು ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ನೋಡುತ್ತಿವೆ. ನಾನು ಭ್ರಷ್ಟಾಚಾರವನ್ನು ಕಿತ್ತೊಗೆಯಲು ಯತ್ನಿಸುತ್ತಿದ್ದೇನೆ. ಅವರು ಮೋದಿ ವಿರುದ್ಧ ಹೋರಾಡುತ್ತಾರೆ, ನಾನು ಭಯೋತ್ಪಾದನೆ ವಿರುದ್ಧ ಹೋರಾಡುತ್ತೇನೆ ಎಂದು ಮಂಗಳವಾರ ಅಹಮದಾಬಾದ್ನಲ್ಲಿ ಮಾತನಾಡಿದ ಮೋದಿ ಹೇಳಿದ್ದಾರೆ.
ಅಸಂಘಟಿತ ವಲಯದಲ್ಲಿರುವವರಿಗಿರುವ ಪಿಂಚಣಿ ಯೋಜನೆಯಾದ ಪಿಎಂ ಶ್ರಮ್ ಯೋಗಿ ಮಾನ್ಧನ್ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ. ಮಧ್ಯವರ್ತಿ ಸಂಸ್ಕೃತಿಯನ್ನು ತಾನು ಕೊನೆಗಾಣಿಸಿರುವುದರಿಂದ ವಿಪಕ್ಷಗಳಿಗೆ ಕಿರಿಕಿರಿಯಾಗಿದೆ. ಅವರ ಕೆಲಸಗಳಿಗೆ ಧಕ್ಕೆ ಆಗುತ್ತಿದೆ ಎಂಬ ಕಾರಣದಿಂದ ಅವರು ಮೋದಿ ಹಠಾವೋ, ಮೋದಿ ಹಠಾವೋ ಎಂದು ಕೂಗುತ್ತಿದ್ದಾರೆ.ಆದರೆ ಈ ಚೌಕೀದಾರ ತಮ್ಮ ನಿರ್ಧಾರಗಳ ಮೇಲೆ ಗಟ್ಟಿಯಾಗಿ ನಿಂತಿದ್ದಾನೆ ಎಂದು ಮೋದಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.