ADVERTISEMENT

ಜಂಗಲ್‌ರಾಜ್‌ ಬರುತ್ತಾ, ಅಭಿವೃದ್ಧಿ ಮೇಲುಗೈ ಸಾಧಿಸುತ್ತಾ: ಶಾ ಪ್ರಶ್ನೆ

ಪಿಟಿಐ
Published 25 ಅಕ್ಟೋಬರ್ 2025, 14:53 IST
Last Updated 25 ಅಕ್ಟೋಬರ್ 2025, 14:53 IST
ಅಮಿತ್‌ ಶಾ–ಪಿಟಿಐ ಚಿತ್ರ
ಅಮಿತ್‌ ಶಾ–ಪಿಟಿಐ ಚಿತ್ರ   

ಖಗಡಿಯಾ, ಬಿಹಾರ: ‘ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯು ‘ಜಂಗಲ್‌ರಾಜ್‌’ ತರಲಿದೆಯೇ ಅಥವಾ ಅಭಿವೃದ್ಧಿ ಮಾರ್ಗದಲ್ಲಿ ಮುನ್ನಡೆಯಲಿದೆಯೇ ಎಂಬುದನ್ನು ನಿರ್ಧರಿಸಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಖಗಡಿಯಾದಲ್ಲಿ ಶನಿವಾರ ನಡೆದ ಬೃಹತ್‌ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್‌ಐಆರ್) ‘ಇಂಡಿಯಾ’ ಒಕ್ಕೂಟವು ವಿರೋಧಿಸುತ್ತಿದೆ. ಪ್ರತಿಯೊಬ್ಬ ನುಸುಳುಕೋರನನ್ನು ಪತ್ತೆಹಚ್ಚಿ, ಮತಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಚುನಾವಣೆ ಬಳಿಕ ಅಂಥವರನ್ನು ದೇಶದಿಂದಲೇ ಗಡೀಪಾರು ಮಾಡಲಾಗುವುದು’ ಎಂದು ತಿಳಿಸಿದ್ದಾರೆ.