ADVERTISEMENT

ಒಡಿಶಾದಲ್ಲಿ ನಕ್ಸಲರ ದಾಳಿ: ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮ

ಪಿಟಿಐ
Published 21 ಜೂನ್ 2022, 14:22 IST
Last Updated 21 ಜೂನ್ 2022, 14:22 IST
ಸಾಂದರ್ಭಿಕ ಚಿತ್ರ: ಪಿಟಿಐ
ಸಾಂದರ್ಭಿಕ ಚಿತ್ರ: ಪಿಟಿಐ   

ಭುವನೇಶ್ವರ: ನಕ್ಸಲರು ನಡೆಸಿದ ದಾಳಿಯಲ್ಲಿ ಸಿಆರ್‌ಪಿಎಫ್‌ನ ಮೂವರು ಸಿಬ್ಬಂದಿ ಹುತಾತ್ಮರಾಗಿರುವ ಘಟನೆ ಒಡಿಶಾದ ನೌಪಾದ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಆರ್‌ಪಿಎಫ್‌ನ ಒಬ್ಬ ಜವಾನ್ ಮತ್ತು ಇಬ್ಬರು ಸಹಾಯಕ ಸಬ್‌–ಇನ್ಸ್‌ಪೆಕ್ಟರ್ ಶ್ರೇಣಿಯ ಸಿಬ್ಬಂದಿ ಮೃತಪಟ್ಟಿದ್ದಾರೆ.

ರಸ್ತೆ ತೆರವು ಕಾರ್ಯದಲ್ಲಿ ತೊಡಗಿದ್ದ ಸಿಆರ್‌ಪಿಎಫ್‌ ತಂಡದ ಮೇಲೆ ಸುಧಾರಿತ ಮತ್ತು ಕಚ್ಚಾ ಗ್ರೆನೆಡ್ ಲಾಂಚರ್‌ಗಳ ಮೂಲಕ ನಕ್ಸಲರು ದಾಳಿ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.