ನವದೆಹಲಿ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಯಾವ ರೀತಿ ನೆರವು ನೀಡಿದರೆ ಅನುಕೂಲ ಎಂದು ನಾರಾಯಣ ಪ್ರಸಾದ್ ಎಂಬುವರು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜೂನ್ 26 ರಂದು ಟ್ವಿಟರ್ ಸಂದೇಶ ಕಳುಹಿಸಿದ್ದರು. ಆ ಅಂಶಗಳನ್ನು ಬಜೆಟ್ನಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
"ದೇಶದಲ್ಲಿ ಸುಮಾರು 30 ಕೋಟಿ ಗ್ರಾಮೀಣ ಮಹಿಳೆಯರು ತಮ್ಮ SHG ( SelfHelpGroup - KutumbhaShri ಸ್ವಸಹಾಯ ಸಂಘ) ಮಾಡಿಕೊಂಡರೆ, ಅವರಿಗೆ ಆರಂಭದಲ್ಲಿ ₹ 50 ಸಾವಿರ ಸಾಲವನ್ನುಕನಿಷ್ಠ ಬಡ್ಡಿ ದರದಲ್ಲಿ, ಅದರಲ್ಲಿ ಯಶಸ್ವಿಯಾದರೆ ನಂತರ ₹1.5 ಲಕ್ಷ ಸಾಲ ನೀಡಿದರೆ ಇಡೀ ಕುಟುಂಬ ಸ್ವಾವಲಂಬಿಯಾಗುತ್ತದೆ. ಹಪ್ಪಳ, ಉಪ್ಪಿನಕಾಯಿ, ಹಲ್ವಾ, ಚೀಲ, ಉಡುಪು ಇತ್ಯಾದಿ ಉತ್ಪನ್ನಗಳಿಗೆ ಸ್ಥಳೀಯ ಹಾಗೂ ಅಂತರ್ಜಾಲ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ದೇಶದ ಅಭಿವೃದ್ಧಿಗೆ ಸಹಾಯವಾಗುತ್ತದೆ" ಎಂದು ಟ್ವೀಟ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.