ADVERTISEMENT

ಶಿಂದೆ ಜತೆಗೆ ವೇದಿಕೆ ಹಂಚಿಕೊಂಡ ಉದ್ಧವ್ ಠಾಕ್ರೆ ಅಣ್ಣ ಜೈದೇವ್

ಪಿಟಿಐ
Published 5 ಅಕ್ಟೋಬರ್ 2022, 19:03 IST
Last Updated 5 ಅಕ್ಟೋಬರ್ 2022, 19:03 IST
ಶಿಂದೆ
ಶಿಂದೆ    

ಮುಂಬೈ: ಶಿವಸೇನಾದ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಅಣ್ಣ ಜೈದೇವ್ ಠಾಕ್ರೆ ಅವರು ಬುಧವಾರ ಸಂಜೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (ಬಿಕೆಸಿ) ನಡೆದ ದಸರಾ ರ‍್ಯಾಲಿ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ, ಶಿವಸೇನಾದ ಬಂಡಾಯ ಬಣದ ಏಕನಾಥ ಶಿಂದೆ ಅವರೊಂದಿಗೆ ವೇದಿಕೆ ಹಂಚಿಕೊಂಡರು.

ಜೈದೇವ್ ಠಾಕ್ರೆ ಅವರಿಂದ ಪ್ರತ್ಯೇಕಗೊಂಡಿರುವ ಅವರ ಪತ್ನಿ ಸ್ಮಿತಾ ಅವರು ಕೂಡಾರ‍್ಯಾಲಿಯಲ್ಲಿ ಹಾಜರಿದ್ದರು. ಉದ್ಧವ್ ಅವರ ಹಿರಿಯ ಅಣ್ಣ, ದಿವಂಗತ ಬಿಂದುಮಾಧವ್ ಠಾಕ್ರೆ ಅವರ ಮಗ ನಿಹಾರ್ ಹಾಗೂ ದಿವಂಗತ ಬಾಳಾ ಠಾಕ್ರೆ ಅವರ ನಂಬಿಕೆಯ ವ್ಯಕ್ತಿಯಾಗಿದ್ದ ಚಂಪಾ ಸಿಂಗ್ ಥಾಪಾ ಅವರು ಕೂಡಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮಿತಾ ಠಾಕ್ರೆ, ‘ಶಿಂದೆ ಅವರು ರ‍್ಯಾಲಿಗೆ ನನ್ನನ್ನು ಆಹ್ವಾನಿಸಿದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.