ADVERTISEMENT

ಶಿಂದೆಗೆ ಬೆಂಬಲ ಸೂಚಿಸಿದ ಉದ್ಧವ್‌ ಅಣ್ಣನ ಮಗ

ಪಿಟಿಐ
Published 29 ಜುಲೈ 2022, 13:57 IST
Last Updated 29 ಜುಲೈ 2022, 13:57 IST
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ    

ಮುಂಬೈ : ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರ ಅಣ್ಣನ ಮಗನಿಹಾರ್‌ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಶುಕ್ರವಾರ ಭೇಟಿ ಮಾಡಿ, ಬೆಂಬಲ ಸೂಚಿಸಿದರು.

ನಿಹಾರ್‌ ಠಾಕ್ರೆ, ಶಿವಸೇನಾ ಸ್ಥಾಪಕ ಬಾಳ್‌ ಠಾಕ್ರೆಯ ಅವರ ಹಿರಿಯ ಮಗ ಬಿಂದುಮಾಧವ್‌ ಠಾಕ್ರೆ ಅವರ ಮಗ.ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಹರ್ಷವರ್ಧನ್‌ ಪಾಟೀಲ್‌ ಅವರ ಮಗಳೊಂದಿಗೆನಿಹಾರ್‌ ಅವರು ವಿವಾಹವಾಗಿದ್ದಾರೆ.

ಇಬ್ಬರ ಭೇಟಿಯ ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕಚೇರಿ, ‘ನಿಹಾರ್‌ ಅವರು ಹಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದರು. ಆದರೆ, ಈಗ ಅವರು ಶಿಂದೆ ಅವರ ನಾಯಕತ್ವದಲ್ಲಿ ರಾಜಕೀಯ ಜೀವನ ಪ್ರಾರಂಭಿಸಲಿದ್ದಾರೆ’ ಎಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.