ADVERTISEMENT

ಜಲ ನಿಗಮದಲ್ಲಿ ಉದ್ಯೋಗ ಪಡೆದಿದ್ದ1300 ನೌಕರರು ಮನೆಗೆ

ನೇಮಕಾತಿ ಅಕ್ರಮ; ಉತ್ತರ ಪ್ರದೇಶ ಸರ್ಕಾರ ಆದೇಶ

ಪಿಟಿಐ
Published 4 ಮಾರ್ಚ್ 2020, 19:45 IST
Last Updated 4 ಮಾರ್ಚ್ 2020, 19:45 IST

ಲಖನೌ: ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರದ ಅವಧಿಯಲ್ಲಿ ಜಲ ನಿಗಮದಲ್ಲಿ ಉದ್ಯೋಗ ಪಡೆದಿದ್ದ 1,300 ನೌಕರರನ್ನು ಉತ್ತರ ಪ್ರದೇಶ ಸರ್ಕಾರ ಒಂದೇ ಬಾರಿಗೆ ವಜಾಗೊಳಿಸಿದೆ. ನೌಕರರ ಆಯ್ಕೆ ಪ್ರಕ್ರಿಯೆಯಲ್ಲಿ ದೋಷ ಕಂಡುಬಂದಿದೆ ಎಂದು ಸರ್ಕಾರ ಕಾರಣ ನೀಡಿದೆ.122 ಸಹಾಯಕ ಎಂಜಿನಿಯರ್‌, 853 ಕಿರಿಯ ಎಂಜಿನಿಯರ್, 325 ಕ್ಲರ್ಕ್‌ಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ಹೆಚ್ಚುವರಿ ಮುಖ್ಯ ಎಂಜಿನಿಯರ್ ಆದೇಶ ಹೊರಡಿಸಿದ್ದಾರೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ಇಲಾಖೆ ನಡೆಸಿದ ತನಿಖಾ ವರದಿಗಳನ್ನು ಆಧರಿಸಿ ನೇಮಕಾತಿಯನ್ನು ಅನೂರ್ಜಿತಗೊಳಿಸಲಾಗಿದೆ.

2016–17ರಲ್ಲಿ ಎಸ್‌ಪಿ ಮುಖಂಡ ಅಜಂ ಖಾನ್ ಅವರು ಇಲಾಖೆಯ ಸಚಿವರಾಗಿದ್ದ ಅವಧಿಯಲ್ಲಿ ಈ ನೇಮಕಾತಿ ನಡೆದಿದ್ದವು. ವಂಚನೆ ಪ್ರಕರಣದಲ್ಲಿ ಅವರು ಈಗ ಜೈಲಿನಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.