ADVERTISEMENT

ಉತ್ತರ ಪ್ರದೇಶ: ಉದ್ಯಮಿಯಿಂದ ₹1ಕೋಟಿ ಸುಲಿಗೆಗೆ ಯತ್ನ, ವ್ಯಕ್ತಿ ಬಂಧನ

ಪಿಟಿಐ
Published 10 ಜೂನ್ 2021, 9:49 IST
Last Updated 10 ಜೂನ್ 2021, 9:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಂಭಾಲ್: ‘ಉದ್ಯಮಿವೊಬ್ಬರಿಂದ ₹1 ಕೋಟಿ ಸುಲಿಗೆ ಮಾಡಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ಗುರುವಾರ ತಿಳಿಸಿದರು.

ಚಾಂದೌಸಿ ಪ್ರದೇಶದ ನಿವಾಸಿ ಶಾರದ ಕುಮಾರ್ ಎಂಬವರು ಈ ಸಂಬಂಧ ದೂರು ನೀಡಿದ್ದರು.

‘ಯಾರೋ ತನ್ನ ಮನೆಯೊಳಗೆ ಪತ್ರ ಎಸೆದು ಹೋಗಿದ್ದರು. ಆ ಪತ್ರದಲ್ಲಿ ₹1 ಕೋಟಿ ನೀಡುವಂತೆ ಹೇಳಲಾಗಿತ್ತು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಈತ ಶಾರದ ಕುಮಾರ್‌ ಅವರ ಪಕ್ಕದ ಮನೆಯ ನಿವಾಸಿಯಾಗಿದ್ದಾನೆ. ಅಲ್ಲದೆ ಈತನ ಮಾನಸಿಕ ಪರಿಸ್ಥಿತಿಯೂ ಸ್ಥಿರವಿಲ್ಲ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಚಕ್ರೇಶ್‌ ಮಿಶ್ರಾ ಅವರು ಹೇಳಿದ್ದಾರೆ.

‘ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ. ತನಿಖೆಯನ್ನು ಆರಂಭಿಸಿದ್ದೇವೆ’ ಎಂದು ಎಸ್‌ಎಚ್‌ಓ ಚಂದೌಸಿ ದೇವೇಂದ್ರ ಶರ್ಮಾ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.