ADVERTISEMENT

ಉತ್ತರ ಪ್ರದೇಶ: ವೇಗವಾಗಿ ಬಂದ ಟ್ರಕ್‌ ಡಿಕ್ಕಿಯಾಗಿ ಗಾಂಧಿ ಪ್ರತಿಮೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 8:17 IST
Last Updated 23 ಅಕ್ಟೋಬರ್ 2021, 8:17 IST

ಬಂಡ, ಉತ್ತರ ಪ್ರದೇಶ:ಶನಿವಾರ ನಸುಕಿನ ಜಾವ ವೇಗವಾಗಿ ಬಂದ ಟ್ರಕ್‌ ಡಿಕ್ಕಿ ಹೊಡೆದ ಪರಿಣಾಮ ಇಲ್ಲಿಯ ಅಟ್ಟಾರ ಪಟ್ಟಣ ಪ್ರದೇಶದಲ್ಲಿಯ ಗಾಂಧಿ ಪ್ರತಿಮೆಗೆ ಜಖಂಗೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಈ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದು, ವಾಹನವನ್ನು ಸುಪರ್ದಿಗೆ ಪಡೆದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ (ಎಎಸ್‌ಪಿ) ಲಕ್ಷ್ಮಿ ನಿವಾಸ್‌ ಮಿಶ್ರಾ ಹೇಳಿದರು.

ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಟ್ಟಾರ ಪೊಲೀಸ್‌ ಠಾಣೆಯ ವೀರ್‌ ಪ್ರತಾಪ್‌ ಸಿಂಗ್‌ ಚೌಹಾಣ್‌ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.