ಗಾಜಿಯಾಬಾದ್: ರೈಲು ಹಳಿಯ ಮೇಲೆ ನಿಂತು ಮೊಬೈಲ್ನಲ್ಲಿ ವಿಡಿಯೊ ಸೆರೆ ಹಿಡಿಯುವ ವೇಳೆ ವೇಗವಾಗಿ ಬಂದ ರೈಲು ಹರಿದು ಮಸ್ಸೂರಿಯ ಕಲೂ ಗರ್ಹಿ ಪ್ರದೇಶದ ಬಳಿ ದಂಪತಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ 9ರ ಹೊತ್ತಿಗೆ ಹಳೆಯ ದೆಹಲಿಯಿಂದ ಪ್ರತಾಪಗಢ ಜಂಕ್ಷನ್ ಕಡೆಗೆ ಹೊರಟಿದ್ದ ಪದ್ಮಾವತ್ ಎಕ್ಷ್ಪ್ರೆಸ್ ರೈಲು ಬರುವುದನ್ನು ಗಮನಿಸದೆ, ಮೊಬೈಲ್ ನೋಡುವುದರಲ್ಲಿ ಮುಳುಗಿದ್ದ ಕಾರಣ ದುರಂತ ಸಂಭವಿಸಿದೆ ಎನ್ನುವುದು ತನಿಖೆಯ ವೇಳೆ ಕಂಡುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ ಇರಾಜ್ ರಾಜ ಹೇಳಿದ್ದಾರೆ.
ಮೃತರನ್ನುಮುಶಾಹಿದ್ ಕಾಲೋನಿಯ ನದೀಮ್ (23) ಆತನ ಪತ್ನಿ ಜೈನಬ್ (20) ಮತ್ತು ಶಕೀಲ್ (30) ಎಂದು ಗುರುತಿಸಲಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.