ಕಟಿಹಾರ್: ಬಿಹಾರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಕಟಿಹಾರ್ ಜಿಲ್ಲೆಯಲ್ಲಿ ಶುಕ್ರವಾರ ವಂದೇ ಭಾರತ್ ಎಕ್ಸ್ಪ್ರೆಸ್ ಹಾದು ಹೋಗುತ್ತಿದ್ದಾಗ ಘಟನೆ ನಡೆದಿದೆ.
ಬಿಹಾರದಲ್ಲಿ ಒಂದು ತಿಂಗಳೊಳಗೆ ಸೆಮಿ ಹೈ-ಸ್ಪೀಡ್ ರೈಲಿನ ಮೇಲೆ ನಡೆದ ಎರಡನೇ ಕಲ್ಲು ತೂರಾಟ ಪ್ರಕರಣ ಇದಾಗಿದೆ.
ನ್ಯೂ ಜಲಪಾಯಿಗುಡಿಯಿಂದ ಹೌರಾಕ್ಕೆ ಚಲಿಸುತ್ತಿದ್ದ 22302 ಸಂಖ್ಯೆಯ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ಕಟಿಹಾರ್ ರೈಲ್ವೆ ವಿಭಾಗದ ಹಿರಿಯ ಭದ್ರತಾ ಕಮಿಷನರ್ ಕಮಲ್ ಸಿಂಗ್ ಹೇಳಿದ್ದಾರೆ.
ಕಲ್ಲು ತೂರಾಟದ ಬಗ್ಗೆ ಪ್ರಯಾಣಿಕರು ದೂರು ನೀಡಿದ ಬಳಿಕ ಘಟನೆ ಬಯಲಾಗಿದೆ. ಬಳಿಕ ರೈಲು ಪರಿಶೀಲಿಸಿದಾಗ ಬೋಗಿಯ ಕಿಟಕಿಯಲ್ಲಿ ಬಿರುಕು ಕಂಡುಬಂದಿದೆ.
ಜನವರಿ 3ರಂದು ಕಿಶಾನ್ಗಂಜ್ ಜಿಲ್ಲೆಯಲ್ಲಿ ಕಲ್ಲು ತೂರಾಟ ನಡೆಸಿದ್ದ ಕಿಡಿಗೇಡಿಗಳನ್ನು ಸಿಸಿಟಿವಿ ನೆರವಿನಿಂದ ಪತ್ತೆ ಹಚ್ಚಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.