ADVERTISEMENT

ಕೆನಡಾದಲ್ಲಿದ್ದು ಭಾರತ ವಿರೋಧಿ ದುಷ್ಕೃತ್ಯ: ಕಠಿಣ ಕ್ರಮಕ್ಕೆ ಆಗ್ರಹ

ಪಿಟಿಐ
Published 25 ಜುಲೈ 2024, 14:23 IST
Last Updated 25 ಜುಲೈ 2024, 14:23 IST
<div class="paragraphs"><p>ರಣಧೀರ್ ಜೈಸ್ವಾಲ್</p></div>

ರಣಧೀರ್ ಜೈಸ್ವಾಲ್

   

(ಚಿತ್ರಕೃಪೆ: X/@MEAIndia)

ನವದೆಹಲಿ: ‘ಕೆನಡಾದಲ್ಲಿ ಇದ್ದುಕೊಂಡು ಭಾರತ ವಿರೋಧಿ ಕೃತ್ಯ ನಡೆಸುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಕೆನಡಾ ಸರ್ಕಾರಕ್ಕೆ ಭಾರತ ಒತ್ತಾಯಿಸಿದೆ.

ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಜಸ್ಟಿನ್‌ ಟ್ರುಡೊರಿಗೆ ಕೊಲೆ ಬೆದರಿಕೆ ಹಾಕಿದ್ದ ಇಬ್ಬರ ವಿರುದ್ಧ ಕೆನಡಾ ಕ್ರಮಕೈಗೊಂಡಿದೆ ಎಂಬ ವರದಿಗೆ ಪ್ರತಿಕ್ರಿಯಿಸಿ ಈ ಹೇಳಿಕೆ ನೀಡಿದೆ.

‘ಭಾರತದ ನಾಯಕರು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿ ಕೊಲೆ ಬೆದರಿಕೆ ಹಾಕುವವರ ವಿರುದ್ಧವೂ ಇಂತಹ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ನಾಯಕರು, ಸಂಸ್ಥೆಗಳು,ವಿಮಾನ ಸಂಸ್ಥೆಗಳು, ರಾಜತಾಂತ್ರಿಕರ ವಿರುದ್ಧ ಬೆದರಿಕೆ ಬಂದಾಗಲೂ ಇಂತಹುದೇ ಕ್ರಮ ಅಗತ್ಯ.ಕಠಿಣ ಕ್ರಮ ಜರುಗಿಸುವುದನ್ನು ನಾವು ನಿರೀಕ್ಷಿಸುತ್ತೇವೆ’ ಎಂದು ಜೈಸ್ವಾಲ್ ಅವರು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.