ನವದೆಹಲಿ: ‘ಭವಿಷ್ಯದಲ್ಲಿ ಒಳ್ಳೆಯದಾಗಲಿದೆ ಎಂದು ಬಿಜೆಪಿ ಬಣ್ಣಿಸುವ ಎಲ್ಲವೂ ದೇಶಕ್ಕೆ ಮಾರಣಾಂತಿಕವಾಗಲಿವೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ವ್ಯಂಗ್ಯವಾಗಿ ಹೇಳಿದ್ದಾರೆ.
‘ಆಯಾ ಕಾಲದಲ್ಲಿ ತಂದಿದ್ದ ಸುಧಾರಣೆ ಕ್ರಮಗಳಿಂದ ದೇಶವು ಈಗಾಗಲೇ ನಲುಗುತ್ತಿದೆ’ ಎಂದು ಹೇಳಿದ್ದಾರೆ. ‘ಅಗ್ನಿಪಥ ಯೋಜನೆಯ ಅನುಕೂಲ ಭವಿಷ್ಯದಲ್ಲಿ ತಿಳಿಯಲಿದೆ’ ಎಂಬ ಪ್ರಧಾನಿ ಹೇಳಿಕೆಗೆ ಅವರು ಈ ಮೂಲಕ ತಿರುಗೇಟು ನೀಡಿದ್ದಾರೆ.
ಪ್ರಧಾನಿಗಳೇ, ನಿಮ್ಮ ಸುಧಾರಣಾ ಕ್ರಮಗಳ ಪರಿಣಾಮಗಳನ್ನು ಜನತೆ ನಿತ್ಯ ಎದುರಿಸುತ್ತಿದ್ದಾರೆ. ‘ನೋಟು ರದ್ದತಿ, ಜಿಎಸ್ಟಿ, ಸಿಎಎ, ದಾಖಲೆಯ ಹಣದುಬ್ಬರ, ನಿರುದ್ಯೋಗ ಸಮಸ್ಯೆ, ಕರಾಳ ಕೃಷಿ ಕಾಯ್ದೆಗಳ ಪಟ್ಟಿಗೆ ಈಗ ಹೊಸದಾಗಿ ಅಗ್ನಿಪಥ ಸೇರ್ಪಡೆಯಾಗಿದೆ‘ ಎಂದು ರಾಹುಲ್ಗಾಂಧಿ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.