ADVERTISEMENT

ದಂಡದಿಂದ ₹16 ಲಕ್ಷಕ್ಕೂ ಹಣ ದುರುಪಯೋಗ: ಅಧಿಕಾರಿ ಅಮಾನತು

ಪಿಟಿಐ
Published 24 ಜುಲೈ 2025, 16:33 IST
Last Updated 24 ಜುಲೈ 2025, 16:33 IST
..
..   

ಕೊಚ್ಚಿ: ಮೋಟಾರು ವಾಹನ ಅಪರಾಧ ಪ್ರಕರಣಗಳಲ್ಲಿ ಸಂಗ್ರಹಿಸಿದ ದಂಡದಿಂದ ₹16 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ದುರುಪಯೋಗಪಡಿಸಿಕೊಂಡ ಆರೋಪದಡಿ ಕೇರಳದ ಮಹಿಳಾ ಪೊಲೀಸ್‌ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಶಾಂತಿ ಕೃಷ್ಣನ್ ಅವರು, ಮುವಾಟ್ಟುಪುಳ ಪೊಲೀಸ್ ಠಾಣೆಯಲ್ಲಿ ಸಹಾಯಕ ಸ್ಟೇಷನ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾಗ ಠಾಣೆಯ ಸಂಚಾರ ಘಟಕದಲ್ಲಿ 2018– 22ರ ನಡುವೆ ಸಂಗ್ರಹಿಸಿದ ಹಣ ದುರುಪಯೋಗ ಮಾಡಿದ್ದಾರೆ ಎಂಬ ಆರೋಪವಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಶಾಂತಿ ಅವರು, ಅಧಿಕಾರಿ ಠಾಣೆಯ ನಗದು ಪುಸ್ತಕದಲ್ಲಿ ಮಾಡಿದ ನಮೂದುಗಳು ಮತ್ತು ದಂಡದ ರಶೀದಿಗಳಲ್ಲಿ ಸಂಗ್ರಹಿಸಿದ ಮೊತ್ತವನ್ನು ಬದಲಾಯಿಸಿ, ಉಳಿದ ₹16,76,650 ಅನ್ನು ತಾವೇ ಇಟ್ಟುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ADVERTISEMENT

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಚಾರ ತಡೆ ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.