ಥಾಣೆ (ಪಿಟಿಐ): ‘ನಟರಾದ ಅಮಿತಾಬ್ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಚಿತ್ರಗಳ ಚಿತ್ರೀಕರಣಕ್ಕೆ ಮಹಾರಾಷ್ಟ್ರದಲ್ಲಿ ತೊಂದರೆಯಾಗಲು ತಮ್ಮ ಪಕ್ಷ ಅವಕಾಶ ನೀಡದು’ ಎಂದು ಕೇಂದ್ರ ಸಚಿವ ಮತ್ತು ಆರ್ಪಿಐ (ಎ) ಮುಖ್ಯಸ್ಥ ರಾಮದಾಸ್ ಅಠವಳೆ ಅವರು ಭಾನುವಾರ ಹೇಳಿದರು.
ನವಿ ಮುಂಬೈನಲ್ಲಿ ನಡೆದ ರ್ಯಾಲಿಯಲ್ಲಿ ಈ ಮಾತು ಹೇಳಿದರು. ‘ಇಂಧನ ದರ ಏರಿಕೆ ಕುರಿತಂತೆ ಉಭಯ ನಟರೂ ತಮ್ಮ ನಿಲುವು ಸ್ಪಷ್ಟಪಡಿಸದಿದ್ದರೆ ಚಿತ್ರೀಕರಣಕ್ಕೆ ತಡೆ ಉಂಟು ಮಾಡಲಾಗುವುದು’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಬೆದರಿಕೆ ಹಾಕಿದ ಎರಡು ದಿನದ ನಂತರ ಅಠವಳೆ ಈ ಹೇಳಿಕೆ ನೀಡಿದ್ದಾರೆ.
‘ಈ ಇಬ್ಬರೂ ನಟರನ್ನು ಭೇಟಿಯಾಗಿ ಅಗತ್ಯ ಸಹಕಾರ ನೀಡುವ ಭರವಸೆ ನೀಡುತ್ತೇನೆ’ ಎಂದು ಅಠವಳೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.