ADVERTISEMENT

ಅಂಬರೀಷ್ ಆರೋಗ್ಯ ಸುಧಾರಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಬೆಂಗಳೂರು: ಸಿಂಗಪುರದ ಮೌಂಟ್‌ ಎಲಿಜಬೆತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯು­ತ್ತಿ­ರುವ ನಟ, ವಸತಿ ಸಚಿವ ಅಂಬ­ರೀಷ್ ಅವರ ಆರೋಗ್ಯ­ದಲ್ಲಿ ಚೇತರಿಕೆ ಕಂಡುಬಂದಿದೆ.

ಅಂಬರೀಷ್ ಅವರೊಂದಿಗೆ ವಿಶೇಷ ವಿಮಾನದಲ್ಲಿ ಸಿಂಗಪುರಕ್ಕೆ ಪ್ರಯಾಣ ಬೆಳೆಸಿದ್ದ  ವಿಕ್ರಂ ಆಸ್ಪತ್ರೆಯ  ವೈದ್ಯರಾದ ಡಾ.ಕೆ.ಎಸ್‌.ಸತೀಶ್‌ ಹಾಗೂ ಡಾ.­ರಘು­­ನಂದನ್‌ ಸೋಮವಾರ ನಗರಕ್ಕೆ ಹಿಂತಿರುಗಿದ್ದು, ಪತ್ರಿಕಾಗೋಷ್ಠಿ   ನಡೆಸಿ ಮಾಹಿತಿ ನೀಡಿದರು.

ಡಾ.ಕೆ.ಎಸ್‌.ಸತೀಶ್‌, ‘ಅಂಬರೀಷ್ ಅವರ ಆರೋಗ್ಯದಲ್ಲಿ ಬಹಳಷ್ಟು ಸುಧಾ­­­ರಣೆ ಕಂಡುಬಂದಿದ್ದು, ಆತಂಕ ಪಡುವ ಅಗತ್ಯವಿಲ್ಲ’ ಎಂದರು.

‘ಮೌಂಟ್ ಎಲಿಜಬೆತ್‌ ಆಸ್ಪತ್ರೆ­ಯಲ್ಲಿ ಶ್ವಾಸಕೋಶತಜ್ಞ ಡಾ.ಆಂಗ್‌ ನೇತೃತ್ವದ  ವೈದ್ಯರ ತಂಡವು  ಅಂಬ­ರೀಷ್ ಅವರಿಗೆ ಚಿಕಿತ್ಸೆ ನೀಡು­ತ್ತಿದ್ದು, ಸಿಂಗ­­ಪುರ ಸರ್ಕಾ­ರವು ಉತ್ತಮ ಸಹ­ಕಾರ ನೀಡು­ತ್ತಿದೆ’ ಎಂದು ಹೇಳಿದರು.

ಕೃತಕ ಉಸಿರಾಟ ಸಾಧನ ಸದ್ಯಕ್ಕೆ ತೆಗೆಯಲ್ಲ: ‘24 ಗಂಟೆಗಳ ಕಾಲ ನಿಗಾ ­ಇರಿಸಿ ಅಂಬರೀಷ್‌ ಅವರ ಶ್ವಾಸ­ಕೋಶದ ಸೋಂಕಿಗೆ ಚಿಕಿತ್ಸೆ ನೀಡಲಾ­ಗು­ತ್ತಿದ್ದು, ಚೇತರಿಕೆ ಇದೆ. ಹೆಚ್ಚಿನ ವಿಶ್ರಾಂ­ತಿಯ ಅಗತ್ಯವಿರುವು­ದ­ರಿಂದ ಸದ್ಯಕ್ಕೆ ಕೃತಕ ಉಸಿ­ರಾಟದ ಸಾಧನ­ವನ್ನು ತೆಗೆ­ಯು­­ವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ದ್ರವರೂಪದ ಆಹಾರವನ್ನೇ ನೀಡ­ಲಾಗು­ತ್ತಿದೆ. ಚಿಕಿತ್ಸೆ ಪೂರ್ಣ­ಗೊಂಡು ಸಂಪೂರ್ಣ ಚೇತರಿಸಿಕೊಳ್ಳಲು 15 ದಿನ­­ಗಳಾದರೂ ಬೇಕಾಗಬಹುದು. ಆದರೆ, ಸಿಂಗಪುರದಿಂದ ಅಂಬರೀಷ್‌ ಹಿಂತಿ­ರುಗುವ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಸ್ವಲ್ಪ ಹೆದರಿಕೆಯಿತ್ತು:  ‘ನಗರದಿಂದ ಸಿಂಗ­ಪುರಕ್ಕೆ ನಾಲ್ಕು ಗಂಟೆಯ ಪ್ರಯಾ­ಣ­­ವಾ­ದ್ದರಿಂದ ವಿಶೇಷ ವಿಮಾನದಲ್ಲಿ ಅಂಬ­ರೀಷ್‌ ಅವ­ರನ್ನು  ಕರೆದು­ಕೊಂಡು ಹೋಗುವ ಸಂದರ್ಭ­ದಲ್ಲಿ ಸ್ವಲ್ಪ ಹೆದರಿಕೆಯಿತ್ತು’ ಎಂದು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.