ADVERTISEMENT

ಅಕಾಡೆಮಿ ಕಾರ್ಯವಿಧಾನ ವಿಕೇಂದ್ರೀಕರಣ ಅಗತ್ಯ

ಸಾಹಿತ್ಯ ಅಕಾಡೆಮಿ ‘ಸುವರ್ಣ ಸಂಭ್ರಮ’ದಲ್ಲಿ ಕೆ.ವಿ.ನಾರಾಯಣ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2014, 19:30 IST
Last Updated 3 ಆಗಸ್ಟ್ 2014, 19:30 IST
ಕರ್ನಾಟಕ ಸಾಹಿತ್ಯ ಅಕಾಡೆಮಿ ಪೂರ್ವಾಧ್ಯಕ್ಷರಾದ ಕೆ.ಎಚ್.ಶ್ರೀನಿವಾಸ್, ಡಾ.ಗಿರಡ್ಡಿ ಗೋವಿಂದರಾಜ, ಪ್ರೊ.­ಎಂ.ಎಚ್.ಕೃಷ್ಣಯ್ಯ, ಡಾ.ಗುರುಲಿಂಗ ಕಾಪಸೆ ಅವರನ್ನು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಅಕಾಡೆಮಿ ‘ಸುವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರೊ.ಮಾಲತಿ ಪಟ್ಟಣಶೆಟ್ಟಿ, ಡಾ.ಕೆ.ವಿ.­ನಾರಾಯಣ, ಡಾ.ಕೆ.ವೈ.ನಾರಾಯಣ ಸ್ವಾಮಿ, ಡಾ.ಕುಂಸಿ ಉಮೇಶ್ ಚಿತ್ರದಲ್ಲಿದ್ದಾರೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪೂರ್ವಾಧ್ಯಕ್ಷರಾದ ಕೆ.ಎಚ್.ಶ್ರೀನಿವಾಸ್, ಡಾ.ಗಿರಡ್ಡಿ ಗೋವಿಂದರಾಜ, ಪ್ರೊ.­ಎಂ.ಎಚ್.ಕೃಷ್ಣಯ್ಯ, ಡಾ.ಗುರುಲಿಂಗ ಕಾಪಸೆ ಅವರನ್ನು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಅಕಾಡೆಮಿ ‘ಸುವರ್ಣ ಸಂಭ್ರಮ’ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರೊ.ಮಾಲತಿ ಪಟ್ಟಣಶೆಟ್ಟಿ, ಡಾ.ಕೆ.ವಿ.­ನಾರಾಯಣ, ಡಾ.ಕೆ.ವೈ.ನಾರಾಯಣ ಸ್ವಾಮಿ, ಡಾ.ಕುಂಸಿ ಉಮೇಶ್ ಚಿತ್ರದಲ್ಲಿದ್ದಾರೆ   

ಶಿವಮೊಗ್ಗ: ‘ಅಕಾಡೆಮಿಗಳ ಕಾರ್ಯ­ಕ್ರಮ­ಗಳು ಇಂದಿನ ಅಗತ್ಯಗಳ ಹಾಗೂ ಹೊಸ ತಲೆಮಾರಿನ ತುಡಿತಗಳಿಗೆ ಅನು­ಗುಣ­ವಾಗಿ ವಿಕೇಂದ್ರೀಕರ­ಣಗೊಳ್ಳ­ಬೇಕು’ ಎಂದು ಕುವೆಂಪು ಭಾಷಾ­ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ವಿ­. ನಾರಾಯಣ ಅಭಿಪ್ರಾಯ­ಪಟ್ಟರು.

ನಗರದ ಕುವೆಂಪು ರಂಗಮಂದಿರ­ದಲ್ಲಿ ಭಾನುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ
ಅಕಾಡೆ­­­ಮಿಯ ‘ಸುವರ್ಣ ಸಂಭ್ರಮ’ ಕಾರ್ಯ­ಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಹಣಕಾಸಿನ ಹೊಣೆಗಾರಿಕೆ ಜತೆಗೆ ಸಾಮಾಜಿಕ–ಸಾಂಸ್ಕೃತಿಕ ಹೊಣೆಗಾರಿಕೆ ಕೂಡ ಅಕಾಡೆಮಿಗಳಿಗೆ ಇರಬೇಕು. ಸಮಾಜದಲ್ಲಿ ಅಕಾಡೆಮಿಗಳ ಬಗ್ಗೆ ಹಗುರ ಭಾವನೆ ಇದೆ; ‘ಬಿಳಿ ಆನೆ’, ‘ಗಂಜಿ ಕೇಂದ್ರ’ ಎಂಬ ಟೀಕಾಸ್ತ್ರಗಳ ನಡುವೆಯೂ ಅಕಾಡೆಮಿಗಳು ಸಾಂಸ್ಕೃ­ತಿಕ ಹೊಣೆಗಾರಿಕೆ ನಿರ್ವಹಿಸುವುದರ ಕುರಿತು ಸುದೀರ್ಘ ಚರ್ಚೆಗಳಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯ ಅಕಾಡೆಮಿ ಗೌರವ ಸ್ವೀಕರಿಸಿದ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಮಾತನಾಡಿ, ಅಕಾಡೆ­ಮಿಗಳ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು. ಸಾಂಸ್ಕೃ­ತಿಕ ಲೋಕದ ಸಾಹಿತಿ, ಕಲಾವಿದರಿಂದ ಕೂಡಿದ ಒಂದು ಸಂಸ್ಥೆಯಾಗಿ ಅಕಾಡೆ­ಮಿ­ಗಳು ರೂಪುಗೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.