ADVERTISEMENT

ಆಚರಣೆಗೆ ಪಾ.ಪು ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 19:30 IST
Last Updated 18 ಜೂನ್ 2012, 19:30 IST

ಬೆಳಗಾವಿ: ರಾಜ್ಯ ಸರ್ಕಾರವು ವಿಧಾನಸಭೆಯ ವಜ್ರಮಹೋತ್ಸವ ಆಚರಿಸಿರುವುದಕ್ಕೆ ಹಿರಿಯ ಪತ್ರಕರ್ತ, ನಾಡೋಜ ಪಾಟೀಲ ಪುಟ್ಟಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `1956ರಲ್ಲಿ ಏಕೀಕರಣವಾಗಿದೆ.  ಹೀಗಾಗಿ ವಜ್ರಮಹೋತ್ಸವ ಆಚರಿಸಲು ಇನ್ನೂ ಮೂರು ವರ್ಷಗಳು ಬಾಕಿ ಉಳಿದಿದ್ದವು. ಹೀಗಿದ್ದಾಗ ರಾಜ್ಯ ಸರ್ಕಾರವು ಈ ವರ್ಷವೇ ವಜ್ರಮಹೋತ್ಸವ ಆಚರಿಸಿರುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು.

~1952ರಲ್ಲಿ ರಾಜ್ಯ ನಿರ್ಮಾಣವಾದರೂ ಏಕೀಕರಣವಾದುದು 1956ರಲ್ಲಿ. ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೇರಿದಂತೆ ಮೈಸೂರು ಪ್ರಾಂತದ ಹಲವು ಮುಖಂಡರು ಏಕೀಕರಣವನ್ನು ವಿರೋಧಿಸಿದ್ದರು~ ಎಂದು ಅವರು ಸ್ಮರಿಸಿದರು.

`ಕೆಲವರು ಎರಡು ಪ್ರತ್ಯೇಕ ರಾಜ್ಯ ಮಾಡುವಂತೆಯೂ ಸಲಹೆ ನೀಡಿದ್ದರು. ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಿ ಕರ್ನಾಟಕ ಏಕೀಕರಣಗೊಂಡರೂ ಮೈಸೂರು ಪ್ರಾಂತ್ಯದ ಜನರಿಗೆ ಸಮಾಧಾನ ತಂದಿರಲಿಲ್ಲ~ ಎಂದು ಪಾ.ಪು ಮೆಲುಕು ಹಾಕಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.