ADVERTISEMENT

ಆಲಿಕಲ್ಲು ಸಹಿತ ಭಾರಿ ಮಳೆ: ಸಿಡಿಲು ಬಡಿದು ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 13:10 IST
Last Updated 2 ಏಪ್ರಿಲ್ 2018, 13:10 IST
ಆಲಿಕಲ್ಲು ಮಳೆಗೆ ಹಾನಿಯಾಗಿರುವ ಪರಂಗಿ ತೋಟ
ಆಲಿಕಲ್ಲು ಮಳೆಗೆ ಹಾನಿಯಾಗಿರುವ ಪರಂಗಿ ತೋಟ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದು, ಇಬ್ಬರು ರೈತರು ಸಿಡಿಲಿಗೆ ಬಲಿಯಾಗಿದ್ದಾರೆ. ಸುಮಾರು 50 ದ್ರಾಕ್ಷಿ ತೋಟಗಳಿಗೆ ಹಾನಿಯಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನೊಡ್ಡಂಪಲ್ಲಿ ಗ್ರಾಮದಲ್ಲಿ ದನ ಮೇಯಿಸಲು ಹೋಗಿದ್ದ ನರಸಿಂಹಪ್ಪ (60), ಸದಾಶಿವ (48) ಸಿಡಿಲು ಬಡಿದು ಮೃತಪಟ್ಟ ರೈತರು. 

(ಕಮ್ಮಗಾನಹಳ್ಳಿಯಲ್ಲಿ ಆಲಿಕಲ್ಲಿನಿಂದ ಆವೃತ್ತಗೊಂಡ ಜಮೀನು)

ADVERTISEMENT

ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಂಡ್ಲಮಂಡಿಕಲ್, ಪೇರೇಸಂದ್ರ, ಶೆಟ್ಟಿಗೆರೆ, ಗೊಲ್ಲವಾರಹಳ್ಳಿ, ಅಡಿಗಲ್, ಪಾತೂರು, ನಲ್ಲಪ್ಪನಹಳ್ಳಿ, ಮಂಡಿಕಲ್, ಕಮ್ಮಗುಟ್ಟಹಳ್ಳಿ ಸುತ್ತಮುತ್ತ ದ್ರಾಕ್ಷಿ ತೋಟಗಳು ಭಾರಿ ಗಾತ್ರದ ಆಲಿಕಲ್ಲಿನ ರಭಸಕ್ಕೆ ಹಾನಿಗೊಂಡಿವೆ. ಆಲಿಕಲ್ಲಿನ ಹೊಡೆತಕ್ಕೆ ದ್ರಾಕ್ಷಿ ಜತೆಗೆ ತರಕಾರಿ, ಹೂವು, ಹಿಪ್ಪು ನೆರಳೆ ಸೊಪ್ಪಿನ ತೋಟಗಳಿಗೂ ಹಾನಿಯಾಗಿದೆ.

(ಆಲಿಕಲ್ಲಿನೊಂದಿಗೆ ಸೆಲ್ಫಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.