ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ದೇವರ ದರ್ಶನಕ್ಕೆ ಆಗಮಿಸಿದ್ದ ಒಂದೇ ಕುಟುಂಬದ ಮೂವರು ಸಹೋದರರು ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ನೀರುಪಾಲಾದ ದುರ್ಘಟನೆ ತಾಲ್ಲೂಕಿನ ನಂದ್ಯಾಲ ಗ್ರಾಮದ ಸಮೀಪ ಭಾನುವಾರ ನಡೆದಿದೆ.
ದಾವಣಗೆರೆ ಮುಸ್ತಫಾ ನಗರದ ನಿವಾಸಿ ರಿಯಾಜ್ ಅಹಮದ್ ಅವರ ಪುತ್ರರಾದ ಸಲ್ಮಾನ್ (20), ಸುಲ್ತಾನ್ (19) ಹಾಗೂ ಮಸ್ತಾನ್ (18) ನದಿ ಪಾಲಾದವರು. ತಾಲ್ಲೂಕಿನ ಕುಂಚೂರು ಗ್ರಾಮದ ಅಲ್ಲಾಸ್ವಾಮಿ ದೇವರ ದರ್ಶನಕ್ಕೆ ರಿಯಾಜ್ ಅಹಮದ್ ಕುಟುಂಬ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.