ಉಡುಪಿ: ಆಫ್ಘಾನಿಸ್ತಾನದ ಕಾಬೂಲ್ನಲ್ಲಿ ತಾಲಿಬಾನ್ ಉಗ್ರರು ಮಂಗಳವಾರ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಮಲ್ಪೆಯ ಬೈಲಕೆರೆ ವಡಭಾಂಡೇಶ್ವರದ ಜಾನ್ ವಿಕ್ರಮ್ ಮಾರ್ಟಿಸ್ (36) ಎಂಬುವವರು ಮೃತಪಟ್ಟಿದ್ದಾರೆ.
ಇಗ್ನೇಶಿಯಸ್ ಮಾರ್ಟಿಸ್ ಮತ್ತು ಜೆಸ್ಸಿ ಇಗ್ನೇಶಿಯಸ್ ದಂಪತಿಯ ಪುತ್ರ ಜಾನ್ ವಿಕ್ರಮ್, ಒಂದೂವರೆ ವರ್ಷಗಳಿಂದ ಅಮೆರಿಕ ಮೂಲದ ಡೈನೊಕಾರ್ಪ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಉಗ್ರರ ದಾಳಿಗೆ ಸಿಕ್ಕಿದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಎರಡು ಮೂರು ದಿನಗಳಲ್ಲಿ ಅವರ ಶವವನ್ನು ಮಲ್ಪೆಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.