ಉಡುಪಿ: ಒಂದೇ ಕುಟುಂಬದ ನಾಲ್ವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶಿರ್ವ ಸಮೀಪದ ಪಡುಬೆಳ್ಳೆಯಲ್ಲಿ ಗುರುವಾರ ನಡೆದಿದೆ.
ಶಂಕರ ಆಚಾರ್ಯ (50), ಅವರ ಪತ್ನಿ ನಿರ್ಮಲ ಆಚಾರ್ಯ, ಮಕ್ಕಳಾದ ಶ್ರೇಯಾ (22) ಮತ್ತು ಶೃತಿ (23) ಮೃತಪಟ್ಟವರು. ಶಂಕರ ಅವರು ಆಭರಣ ತಯಾರಿಕೆ ವೃತ್ತಿ ಮಾಡುತ್ತಿದ್ದರು.
ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.