ಬೆಂಗಳೂರು: ರಾಜ್ಯದಲ್ಲಿ ಎಚ್1 ಎನ್1ಗೆ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ.
ಪಾವಗಡದ ಶಿವಶಂಕರಪ್ಪ (42) ಅವರು ಇದೇ ತಿಂಗಳು 21ರಂದು ಮೃತಪಟ್ಟಿದ್ದರು. ಹಾಸನದ ಅರಕಲಗೋಡಿನ ತುಳಸಮ್ಮ (48) ಅವರು ಇದೇ 18ರಂದು ಸಾವನ್ನಪ್ಪಿದ್ದಾರೆ. ಮಂಗಳವಾರ ಬಂದ ರಕ್ತ ಮಾದರಿ ವರದಿಯಲ್ಲಿ ಇಬ್ಬರಿಗೂ ಎಚ್1 ಎನ್1 ಸೋಂಕು ಇದ್ದುದು ದೃಢಪಟ್ಟಿದೆ. ಇಬ್ಬರೂ ಚಿಕಿತ್ಸೆಗಾಗಿ ನಗರದ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ರಾಜ್ಯದಲ್ಲಿ ಎಚ್1 ಎನ್1ಗೆ ಮೃತಪಟ್ಟವರ ಸಂಖ್ಯೆ ಇದೀಗ 12ಕ್ಕೆ ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.