ADVERTISEMENT

ಎರ್ಮೈ ಫಾಲ್ಸ್‌ನಲ್ಲಿ ಬಿದ್ದು ಚಿತ್ರ ನಿರ್ದೇಶಕ ಸಂತೋಷ್‌ ಶೆಟ್ಟಿ ಸಾವು

​ಪ್ರಜಾವಾಣಿ ವಾರ್ತೆ
Published 30 ಮೇ 2018, 9:06 IST
Last Updated 30 ಮೇ 2018, 9:06 IST
ಸಂತೋಷ್‌ ಶೆಟ್ಟಿ
ಸಂತೋಷ್‌ ಶೆಟ್ಟಿ   

ಮಂಗಳೂರು: ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಸಮೀಪದ ಎರ್ಮೈ ಫಾಲ್ಸ್‌ನಲ್ಲಿ ಕಾಲುಜಾರಿ ಬಿದ್ದು ಮೃತ ಪಟ್ಟಿದ್ದಾರೆ.

'ಕನಸು' ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಮತ್ತು ಇತರ ಮೂವರು ಬುಧವಾರ ಡ್ರೋಣ್ ಕ್ಯಾಮೆರಾದೊಂದಿಗೆ ಎರ್ಮೈ ಫಾಲ್ಸ್‌ಗೆ ಬಂದಿದ್ದರು. ಈ ವೇಳೆ ಸಂತೋಷ್ ಕಾಲು ಜಾರಿ ನೀರಿಗೆ ಬಿದ್ದರು. ಜತೆಯಲ್ಲಿದ್ದ ಪ್ರೀತಂ ಅವರು ತಕ್ಷಣ ಅಗ್ಗಿಶಾಮಕ ಸಿಬ್ಬಂದಿಗೆ ಕರೆ ಮಾಡಿದರು. ಅಗ್ನಿಶಾಮಕ ಸಿಬ್ಬಂದಿ  ಸಂತೋಷ್ ಅವರ ಮೃತದೇಹವನ್ನು ಮೇಲೆತ್ತಿದ್ದಾರೆ.

ಮೃತದೇಹವನ್ನು ಬೆಳ್ತಂಗಡಿಗೆ ತರುವ ಕಾರ್ಯ ನಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.