ಮೈಸೂರು: ನಗರದ ಸದ್ವಿದ್ಯಾ ಪ್ರೌಢಶಾಲೆಯ ಕೆ. ಕೃತಿ ಮರುಮೌಲ್ಯಮಾಪನ ನಂತರ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 622 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಎ.ಎನ್. ಕೃಷ್ಣ ಮತ್ತು ಬಿ.ಎಂ. ಲತಾ ದಂಪತಿ ಪುತ್ರಿ ಕೃತಿಗೆ ಈ ಮೊದಲು 615 ಅಂಕ ಬಂದಿದ್ದವು. ಮರುಮೌಲ್ಯಮಾಪನ ಬಳಿಕ 7 ಅಂಕ ಹೆಚ್ಚು ಬಂದಿದ್ದು, ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಎಂ.ವಿ. ವರದರಾಜನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.