ADVERTISEMENT

ಕಬ್ಬು ಬೆಳೆಗಾರನ ಮೂತ್ರಪಿಂಡ ಕಸಿಗೆ ರಾಜ್ಯ ಸರ್ಕಾರ ಅನುಮತಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 9:36 IST
Last Updated 17 ಏಪ್ರಿಲ್ 2018, 9:36 IST
ಕಬ್ಬು ಬೆಳೆಗಾರನ ಮೂತ್ರಪಿಂಡ ಕಸಿಗೆ ರಾಜ್ಯ ಸರ್ಕಾರ ಅನುಮತಿ
ಕಬ್ಬು ಬೆಳೆಗಾರನ ಮೂತ್ರಪಿಂಡ ಕಸಿಗೆ ರಾಜ್ಯ ಸರ್ಕಾರ ಅನುಮತಿ   

ಬೆಂಗಳೂರು: ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರೊಬ್ಬರ ಮೂತ್ರಪಿಂಡ ಕಸಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

'ನನ್ನ ಸಂಬಂಧಿ ಮೂತ್ರಪಿಂಡ ದಾನ ಮಾಡಲು ಮುಂದೆ ಬಂದಿದ್ದಾರೆ. ಆದರೆ, ಆರೋಗ್ಯ ಇಲಾಖೆ ಇದಕ್ಕೆ ಅನುಮತಿ ನಿರಾಕರಿಸಿದೆ. ಸಂಬಂಧಿಕರು ಎಂಬ ಅಂಶದ ಬಗೆಗಿನ ದಾಖಲೆಗೆ ತಕರಾರು ಎತ್ತಿದೆ. ನಾನು ಇಬ್ಬರು ಹೆಣ್ಣು ಮಕ್ಕಳ ತಂದೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದೇನೆ. ಆದ್ದರಿಂದ ಕೂಡಲೇ ಈ ಕುರಿತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು' ಎಂದು ಕೋರಿ ರವಿಕುಮಾರ್ ಎಂಬುವರು ರಿಟ್ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆ ನಡೆಯಿತು.

ADVERTISEMENT

'ರಾಜ್ಯ ಸರ್ಕಾರ ನಮ್ಮ ಕಕ್ಷಿದಾರರಿಗೆ ಮೂತ್ರಪಿಂಡ ಕಸಿಗೆ ಅವಕಾಶ ಕಲ್ಪಿಸಿರುವ ಕಾರಣ ಅರ್ಜಿ ಹಿಂಪಡೆಯುತ್ತಿದ್ದೇವೆ' ಎಂದು ಅರ್ಜಿದಾರರ ಪರ ವಕೀಲ ಕೆ.ಎನ್. ಫಣೀಂದ್ರ ನ್ಯಾಯಪೀಠಕ್ಕೆ ತಿಳಿಸಿದರು‌.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.