ADVERTISEMENT

ಕರಾಳ ದಿನಾಚರಣೆ ವೇಳೆ ಸಚಿವ ಮಹದೇವಪ್ಪ ಅವರಿಂದ ನಿಯಮ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 8:45 IST
Last Updated 8 ನವೆಂಬರ್ 2017, 8:45 IST
ಕರಾಳ ದಿನಾಚರಣೆ ವೇಳೆ ಸಚಿವ ಮಹದೇವಪ್ಪ ಅವರಿಂದ ನಿಯಮ ಉಲ್ಲಂಘನೆ
ಕರಾಳ ದಿನಾಚರಣೆ ವೇಳೆ ಸಚಿವ ಮಹದೇವಪ್ಪ ಅವರಿಂದ ನಿಯಮ ಉಲ್ಲಂಘನೆ   

ಮೈಸೂರು: ದೊಡ್ಡ ಮುಖಬೆಲೆಯ ನೋಟು ರದ್ದತಿ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಬುಧವಾರ ನಡೆಸಿದ ಕರಾಳ ದಿನಾಚರಣೆ ವೇಳೆ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿಯಮ ಉಲ್ಲಂಘಿಸಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ನೂರು ಮೀಟರ್ ಅಂತರದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂಬ ನಿಯಮವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ಬಾಗಿಲಿನವರೆಗೆ ಬಂದರೂ ಪೊಲೀಸರು ತಡೆಯಲಿಲ್ಲ.

ಇದನ್ನು ಕಂಡ ಇತರ ಸಂಘಟನೆಗಳ ಸದಸ್ಯರು 'ನಾವು ಪ್ರತಿಭಟನೆ ಮಾಡುವಾಗ ನೂರು ಮೀಟರ್ ಅಂತರದಲ್ಲೇ ತಡೆಯಲಾಗುತ್ತದೆ. ಈಗ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಾಗಿಲಿನವರೆಗೆ ಬಂದರೂ ತಡೆಯಲಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.