ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿಯಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ಭಟ್ಕಳದಲ್ಲಿ 13 ಸೆಂ.ಮೀ ಮಳೆಯಾಗಿದೆ.
ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಹೊನ್ನಾವರ 11, ಬಂಟ್ವಾಳ, ಕೋಟ, ಕಾರ್ಕಳ, ಕೊಲ್ಲೂರು, ಗೋಕರ್ಣ 10, ಕುಂದಾಪುರ, ಕುಮಟಾ, ಆಗುಂಬೆ 9, ಮೂಲ್ಕಿ, ಪುತ್ತೂರು, ಉಡುಪಿ 8, ಮೂಡುಬಿದಿರೆ, ಮಾಣಿ, ಬೆಳ್ತಂಗಡಿ 7, ಮಂಗಳೂರು, ಧರ್ಮಸ್ಥಳ, ಉಪ್ಪಿನಂಗಡಿ, ಸುಳ್ಯ, ಅಂಕೋಲ 6, ಸಿದ್ದಾಪುರ, ಕಾರವಾರ, ಕೊಟ್ಟಿಗೆಹಾರ 5, ಭಾಗಮಂಡಲ, ಮಡಿಕೇರಿ 4, ಯಲ್ಲಾಪುರ, ಖಾನಾಪುರ, ಬೆಳಗಾವಿ, ಹೊಸನಗರ 3, ಶಿರಸಿ, ಲೋಂಡ, ನಾಪೋಕ್ಲು, ಪೊನ್ನಂಪೇಟೆ, ಮಾದಾಪುರ, ಲಿಂಗನಮಕ್ಕಿ, ಹುಂಚದಕಟ್ಟೆ, ಶೃಂಗೇರಿ, ಕಳಸ, ಜಯಪುರ 2, ಸಿದ್ದಾಪುರ, ಬನವಾಸಿ, ಮಂಚಿಕೇರಿ, ಬೆಳಗಾವಿ ವಿಮಾನ ನಿಲ್ದಾಣ, ನಿಪ್ಪಾಣಿ, ಔರಾದ್, ವಿರಾಜಪೇಟೆ, ಸಾಗರ, ತೀರ್ಥಹಳ್ಳಿ, ಮೂಡಿಗೆರೆ, ಬಾಳೆಹೊನ್ನೂರು, ಆವತಿ, ಸಕಲೇಶಪುರದಲ್ಲಿ 1 ಸೆಂ.ಮೀ ಮಳೆಯಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.