ಬೆಂಗಳೂರು: ‘ಕರ್ನಾಟಕ ಕೇಸರಿಯಾಗುವುದಿಲ್ಲ... ಆದರೆ, ವರ್ಣರಂಜಿತವಾಗಲಿದೆ’ ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ವಿಶ್ವಾಸಮತ ಯಾಚಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ ಬಗ್ಗೆ ವ್ಯಂಗ್ಯವಾಡಿರುವ ಅವರು, ‘ಆರಂಭವಾಗುವುದಕ್ಕೂ ಮುನ್ನವೇ ಪಂದ್ಯ ಮುಕ್ತಾಯವಾಗಿದೆ. 56 ಅನ್ನು ಮರೆತುಬಿಡಿ, 55 ಗಂಟೆಗಳ ಕಾಲವೂ ಉಳಿಸಲಾಗಿಲ್ಲ. ತಮಾಷೆಯನ್ನು ಬದಿಗಿಟ್ಟು ಹೇಳುವುದಾದರೆ, ಹೆಚ್ಚಿನ ರಾಜಕೀಯ ಕೆಸರೆರಚಾಟ ನೋಡಲು ಪ್ರಿಯ ನಾಗರಿಕರು ಸಿದ್ಧರಾಗಿರಿ. ನಾಗರಿಕರ ಪರವಾದ ನಿಲುವನ್ನು ಹಾಗೂ #justasking ಮುಂದುವರಿಸಲಿದ್ದೇನೆ’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.